ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ‘ಚೌಕಿದಾರ್‌’ ನೂತನ ಸಿನಿಮಾದ ಶೀರ್ಷಿಕೆಯನ್ನು ನಟ ಶ್ರೀಮುರಳಿ ರಿವೀಲ್‌ ಮಾಡಿದ್ದಾರೆ. ಬಹುಭಾಷೆಗಳಲ್ಲಿ ಮೂರಿಬರಲಿರುವ ಈ ಸಿನಿಮಾದ ಹೀರೋ ಆಗಿ ಪೃಥ್ವಿ ಅಂಬರ್‌ ನಟಿಸಲಿದ್ದಾರೆ. ಸಚಿನ್‌ ಬಸ್ರೂರು ಸಂಗೀತ ಚಿತ್ರಕ್ಕೆ ಇರಲಿದೆ.

ಚಂದ್ರಶೇಖರ್‌ ಬಂಡಿಯಪ್ಪ ನಿರ್ದೇಶನದ ನೂತನ ಚಿತ್ರದಲ್ಲಿ ಪೃಥ್ವಿ ಅಂಬರ್‌ ಹೀರೋ ಆಗಿ ನಟಿಸುತ್ತಿದ್ದಾರೆ. ಬಹುಭಾಷೆಗಳಲ್ಲಿ ತಯಾರಾಗಲಿರುವ ಈ ಸಿನಿಮಾದ ಶೀರ್ಷಿಕೆಯನ್ನು ನಟ ಶ್ರೀಮುರಳಿ ರಿವೀಲ್‌ ಮಾಡಿದ್ದರೆ. ‘ಆನೆ ಪಟಾಕಿ’ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಚಂದ್ರಶೇಖರ್ ಬಂಡಿಯಪ್ಪ ಆ ಬಳಿಕ ‘ರಥಾವರ’ ಸಿನಿಮಾ ಮೂಲಕ ದೊಡ್ಡ ಹೆಸರು ಮಾಡಿದರು. ನಂತರ ‘ತಾರಕಾಸುರ’ ಸಿನಿಮಾ ನಿರ್ದೇಶಿಸಿದ ಅವರು ಬಾಲಿವುಡ್‌ಗೆ ಹಾರಿದ್ದರು. ಅಲ್ಲಿ ‘ರೆಡ್ ಕಾಲರ್’ ಸಿನಿಮಾ ನಿರ್ದೇಶಿಸಿದ್ದು, ಇದರಲ್ಲಿ ಕನ್ನಡ ನಟ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಗುರುದತ್ ಗಾಣಿಗ ನಿರ್ದೇಶನದ ಕರಾವಳಿ ಚಿತ್ರಕ್ಕೆ ಕತೆ ಬರೆದಿದ್ದಾರೆ. ಇದೀಗ ಹೊಸ ಸಿನಿಮಾ ‘ಚೌಕಿದಾರ್‌’ ಘೋಷಣೆಯಾಗಿದೆ.

‘ಚೌಕಿದಾರ್’ ಶೀರ್ಷಿಕೆ ಕೇಳಿದಾಕ್ಷಣ ಇದೊಂದು ಆಕ್ಷನ್‌ – ಮಾಸ್‌ ಸಿನಿಮಾ ಎನ್ನುವ ಫೀಲ್‌ ಸಿಗುತ್ತದೆ. ಆದರೆ ನಿರ್ದೇಶಕರು ಹೇಳುವಂತೆ ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್‌. ತಮ್ಮ ಪ್ರತೀ ಸಿನಿಮಾದಲ್ಲೂ ಹೊಸತನ ತರುವ ಚಂದ್ರಶೇಕರ್‌ ಬಂಡಿಯಪ್ಪ ಈ ಬಾರಿ ಕೂಡ ಹೊಸದೇನನ್ನೋ ಹೇಳುತ್ತಿರುವಂತಿದೆ. ವಿದ್ಯಾ ಶೇಖರ್ ಎಂಟರ್‌ಟೇನ್‌ಮೆಂಟ್‌ ಬ್ಯಾನರ್ ಅಡಿ ಕಲ್ಲಹಳ್ಳಿ ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಹಾಡುಗಳನ್ನು ರಚಿಸುತ್ತಿದ್ದಾರೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ಬಳಗದ ಬಗ್ಗೆ ಮುಂಬರುವ ದಿನಗಳಲ್ಲಿ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿದೆ.

LEAVE A REPLY

Connect with

Please enter your comment!
Please enter your name here