ಈ ಹಿಂದೆ ‘ಆಪಲ್‌ ಕೇಕ್‌’ ನಿರ್ದೇಶಿಸಿದ್ದ ರಂಜಿತ್‌ ನಿರ್ದೇಶನದ ನೂತನ ಸಿನಿಮಾ ‘ಕಾಗದ’ದ ಟೀಸರ್‌ ಬಿಡುಗಡೆಯಾಗಿದೆ. ಇದು ಮೊಬೈಲ್‌ ಬರುವ ಮುಂಚಿನ ಪ್ರೇಮಕತೆ. ಬಾಲನಟಿಯಾಗಿ ಪರಿಚಯವಾಗಿದ್ದ ಅಂಕಿತ ಜಯರಾಂ ಈ ಸಿನಿಮಾ ಮೂಲಕ ನಾಯಕಿಯಾಗಿದ್ದು, ಆದಿತ್ಯ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

‘ಈ ಸಿನಿಮಾದಲ್ಲಿ ಮೊಬೈಲ್‌ ಬರುವುದಕ್ಕೂ ಮುಂಚಿನ ಪ್ರೇಮಕತೆಯಿದೆ. ಹಳ್ಳಿಹಳ್ಳಿಗಳ ನಡುವಿನ ವೈಷಮ್ಯದ ನಡುವೆಯೂ ಅರಳಿದ ಪ್ರೇಮಕಥೆ ಇದೆ. ಪ್ರಸ್ತುತ ಈ ಚಿತ್ರದ ಚಿತ್ರೀಕರಣ ಹಾಗೂ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಮುಕ್ತಾಯವಾಗಿದೆ. ತೆರೆಗೆ ಬರಲು ಸಿದ್ದತೆ ನಡೆಯುತ್ತಿದೆ’ ಎನ್ನುತ್ತಾರೆ ‘ಕಾಗದ’ ಚಿತ್ರದ ನಿರ್ದೇಶಕ ರಂಜಿತ್‌. ಈ ಹಿಂದೆ ‘ಆಪಲ್‌ ಕೇಕ್‌’ ಸಿನಿಮಾ ನಿರ್ದೇಶಿಸಿದ್ದ ಅವರಿಗಿದು ಎರಡನೇ ಸಿನಿಮಾ. ‘ಕನ್ನಡದಲ್ಲಿ ಸಾಕಷ್ಟು ಪ್ರೇಮಕಥೆಗಳು ಬಂದಿವೆ. ಇದು ಮತ್ತೊಂದು ವಿಭಿನ್ನ ಲವ್‌ಸ್ಟೋರಿ’ ಎನ್ನುವುದು ನಿರ್ಮಾಪಕ ಆಂಜನೇಯ ಅವರ ಮಾತು. ಜಂಕಾರ್‌ ಮ್ಯೂಸಿಕ್‌ನಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಬಾಲನಟಿಯಾಗಿ ಹೆಸರು ಮಾಡಿದ್ದ ಅಂಕಿತಾ ಜಯರಾಂ ಈ ಚಿತ್ರದ ಮೂಲಕ ನಾಯಕನಟಿಯಾಗುತ್ತಿದ್ದಾರೆ. ನೂತನ ಪ್ರತಿಭೆ ಆದಿತ್ಯ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಟಿ ನೇಹಾ ಪಾಟೀಲ್ ಅವರಿಗೆ ವಿಶೇಷ ಪಾತ್ರವಿದೆ. ಬಲ ರಾಜ್ವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಇತರೆ ಪ್ರಮುಖ ಪಾತ್ರಧಾರಿಗಳು. ನಾಲ್ಕು ಹಾಡುಗಳಿರುವ ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡಿದ್ದಾರೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ, ಪವನ್ ಗೌಡ ಸಂಕಲನ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here