‘ನನ್ನರಸಿ ರಾಧೆ’, ‘ಮೌನರಾಗ’,’ಕರಿಮಣಿ’, ‘ಶಾಂತಂ ಪಾಪಂ’ ಸೇರಿದಂತೆ ಜನಪ್ರಿಯ ಕಿರುತೆರೆ ಸರಣಿಗಳನ್ನು ನಿರ್ದೇಶಿಸಿದ್ದ ವಿನೋದ್‌ ದೊಂಡಾಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿನೋದ್‌ ನಿರ್ದೇಶನದ ‘ಅಶೋಕ ಬ್ಲೇಡ್‌’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿತ್ತು.

ಕನ್ನಡ ಕಿರುತೆರೆ ಮತ್ತು ಸಿನಿಮಾ ನಿರ್ದೇಶಕ ವಿನೋದ್‌ ದೊಂಡಾಲೆ ಇಂದು (ಜುಲೈ 20) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಎರಡು ದಶಕಗಳಿಂದ ಅವರು ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದರು. ಕಿರುತೆರೆಯ ಜನಪ್ರಿಯ ನಿರ್ದೇಶಕ ಟಿ ಎನ್‌ ಸೀತಾರಾಂ ಮತ್ತು ಕಿರುತೆರೆ – ಸಿನಿಮಾ ನಿರ್ದೇಶಕ ಪಿ ಶೇಷಾದ್ರಿ ಅವರಲ್ಲಿ ಹಲವು ವರ್ಷಗಳ ಕಾಲ ವಿನೋದ್‌ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಅವರ ಸ್ವತಂತ್ರ್ಯ ನಿರ್ದೇಶನದ ‘ಮೌನರಾಗ’, ‘ನನ್ನರಸಿ ರಾಧೆ’, ‘ಕರಿಮಣಿ’ ಸರಣಿಗಳು ಯಶಸ್ವಿಯಾಗಿದ್ದವು. ಇವುಗಳಿಗೂ ಮುನ್ನ ಅವರು ‘ಶಾಂತಂ ಪಾಪಂ’ ಸರಣಿ ನಿರ್ದೇಶಿಸಿದ್ದರು. ಸದ್ಯ ಸತೀಶ್‌ ನೀನಾಸಂ ನಟನೆಯ ‘ಅಶೋಕ ಬ್ಲೇಡ್‌’ ಸಿನಿಮಾ ನಿರ್ದೇಶನದಲ್ಲಿ ಅವರು ತೊಡಗಿಸಿಕೊಂಡಿದ್ದರು. ಈ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿತ್ತು. ವಿನೋದ್ ಅವರ ಸಾವಿಗೆ ಕಾರಣ ಏನೆನ್ನುವುದು ನಿಖರವಾಗಿ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

LEAVE A REPLY

Connect with

Please enter your comment!
Please enter your name here