ಕೊಲೆ ಕೇಸ್‌ವೊಂದರ ಸಂಬಂಧ ಬೆಂಗಳೂರು ಪೊಲೀಸರು ಮೈಸೂರಿನಲ್ಲಿ ನಟ ದರ್ಶನ್‌ ಅವರನ್ನು ವಿಚಾರಣೆಗಾಗಿ ಕರೆತಂದಿದ್ದಾರೆ. ಈ ಬೆಳವಣಿಗೆ ದರ್ಶನ್‌ ಅಭಿಮಾನಿಗಳಿಗೆ ಆಘಾತ ತಂದಿದೆ.

ರೇಣುಕಾಸ್ವಾಮಿ ಎನ್ನುವವರ ಕೊಲೆ ಕೇಸ್‌ವೊಂದರ ಸಂಬಂಧವಾಗಿ ಬೆಂಗಳೂರು ಪೊಲೀಸರು ನಟ ದರ್ಶನ್‌ ಅವರನ್ನು ವಿಚಾರಣೆಗೆ ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಫಾರ್ಮ್‌ಹೌಸ್‌ನಲ್ಲಿದ್ದ ನಟನನ್ನು ವಿಚಾರಣೆಗೆ ಕರೆತರಲಾಗಿದೆ. ನಟಿ ಪವಿತ್ರಾ ಗೌಡ ಅವರು ಇತ್ತೀಚೆಗೆ ನಟ ದರ್ಶನ್‌ ಜೊತೆಗಿನ ತಮ್ಮ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಎನ್ನುವವರು ಅಶ್ಲೀಲವಾಗಿ ಕಾಮೆಂಟ್‌ ಮಾಡಿದ್ದರು. ಇದಕ್ಕೆ ಸೇಡಿನ ರೂಪದಲ್ಲಿ ರೇಣುಕಾಸ್ವಾಮಿ ಕೊಲೆ ನಡೆದಿದೆ ಎನ್ನಲಾಗಿದೆ.

ಘಟನೆ ನಡೆದದ್ದು ಜೂನ್‌ 9ರಂದು. ರೇಣುಕಾಸ್ವಾಮಿ ಎನ್ನುವವರನ್ನು ಬೆಂಗಳೂರಿಗೆ ಕರೆತಂದು ಶೆಡ್‌ನಲ್ಲಿರಿಸಿ ಹಲ್ಲೆ ನಡೆಸಲಾಗಿದೆ. ಹತ್ಯೆಯ ನಂತರ ರೇಣುಕಾಸ್ವಾಮಿ ಮೃತದೇಹವನ್ನು ಮೋರಿಯಲ್ಲಿ ಎಸೆದಿದ್ದಾರೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ನಟ ದರ್ಶನ್‌ ಹೆಸರು ಹೇಳಿದ್ದಾರೆ. ಕೂಡಲೇ ಪೊಲೀಸರು ದರ್ಶನ್‌ರನ್ನು ವಿಚಾರಣೆಗೆಂದು ಕರೆತಂದಿದ್ದಾರೆ. ಇದೇ ಕೇಸ್‌ಗೆ ಸಂಬಂಧಿಸಿದಂತೆ ಉದ್ಯಮಿ ವಿನಯ್‌ ಎನ್ನುವವರನ್ನೂ ಪೊಲೀಸರು ವಿಚಾರಣೆಗೆಂದು ಕರೆತಂದಿದ್ದಾರೆ.

LEAVE A REPLY

Connect with

Please enter your comment!
Please enter your name here