ಶ್ರೀಕಾಂತ್‌ ನಿರ್ದೇಶನದಲ್ಲಿ ಪ್ರಣಂ ದೇವರಾಜ್‌ ಮತ್ತು ಖುಷಿ ನಟಿಸುತ್ತಿರುವ ‘S/o ಮುತ್ತಣ್ಣ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಮುಹೂರ್ತ ನಡೆದಿದ್ದ ಬಂಡಿ ಮಹಾಕಾಳಿ ದೇಗುಲದಲ್ಲೇ ಕುಂಬಳಕಾಯಿ ಹೊಡೆಯಲಾಗಿದೆ. ವಾರಣಾಸಿ ಮತ್ತು ಬೆಂಗಳೂರಿನಲ್ಲಿ ಸಿನಿಮಾಗೆ ಚಿತ್ರೀಕರಣ ನಡೆದಿದೆ.

ನಟ ದೇವರಾಜ್‌ ಅವರ ಕಿರಿಯ ಪುತ್ರ ಪ್ರಣಂ ದೇವರಾಜ್‌ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘S/o ಮುತ್ತಣ್ಣ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಮುಹೂರ್ತ ನಡೆದಿದ್ದ ಬಂಡಿ ಮಹಾಕಾಳಿ ದೇಗುಲದಲ್ಲೇ ಕುಂಬಳಕಾಯಿ ಹೊಡೆಯಲಾಗಿದೆ. ವಾರಣಾಸಿ ಮತ್ತು ಬೆಂಗಳೂರಿನಲ್ಲಿ ಸಿನಿಮಾಗೆ ಚಿತ್ರೀಕರಣ ನಡೆದಿದೆ. ಹೀರೋ ಪ್ರಣಂ ಮಾತನಾಡಿ, ‘ಇವತ್ತು ಖುಷಿಯೂ ಇದೆ. ಬೇಜಾರೂ ಆಗಿದೆ. ಸಿನಿಮಾದ ಶೂಟಿಂಗ್ ಮುಕ್ತಾಯಗೊಂಡಿರುವುದು ಖುಷಿಯ ವಿಷಯ. ಮತ್ತೊಂದೆಡೆ, ನಾಳೆಯಿಂದ ಇವರು ಯಾರೂ ಸಿಗುವುದಿಲ್ಲ ಎನ್ನುವುದು ಬೇಸರ. ಈ ಜರ್ನಿ ಖುಷಿ ಜೊತೆಗೆ ಎಮೋಷನಲ್ ಆಗಿಯೂ ಇತ್ತು. ಟೆನ್ಷನ್ ಕೂಡ ಇತ್ತು. ಅಪ್ಪ – ಮಗನ ಬಾಂಧವ್ಯದ ಕಥೆ ಇದು. ರಂಗಾಯಣ ರಘು ಸರ್ ಸೆಟ್‌ನಲ್ಲಿ ನನಗೆ ತಂದೆ ಥರ ಇದ್ದರು. ಇವರಿಂದ ಸಾಕಷ್ಟು ಕಲಿತ್ತಿದ್ದೇನೆ. ಖುಷಿ ಅದ್ಭುತ ನಟಿ. ಸಿನಿಮಾದ ಅವಕಾಶಕ್ಕಾಗಿ ನಿರ್ಮಾಪಕರಿಗೆ ಧನ್ಯವಾದ’ ಎಂದರು.

‘ನಿರ್ದೇಶಕ ಶ್ರೀಕಾಂತ್ ಸರ್‌ಗೆ ತುಂಬಾ ಕ್ಲಾರಿಟಿ ಇದೆ. ಈ ಜನರೇಷನ್‌ ಅಪ್ಪ-ಮಗ, ಅಪ್ಪ-ಮಗಳು, ಗೆಳೆತನ ಎಲ್ಲಾ ಎಮೋಷನ್‌ಗಳನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಸಚಿನ್ ಬಸ್ರೂರು ಅದ್ಭುತವಾಗಿ ಸಂಗೀತ ಕಂಪೋಸ್ ಮಾಡಿದ್ದಾರೆ. ಧನು ಮಾಸ್ಟರ್ ನನ್ನಿಂದ ಒಳ್ಳೆಯ ಡ್ಯಾನ್ಸ್ ಮಾಡಿಸಿದ್ದಾರೆ. ಕೃಷ್ಣಣ್ಣ ನಮ್ಮನ್ನು ತುಂಬಾ ಚೆನ್ನಾಗಿ ಕ್ಯಾಪ್ಟರ್ ಮಾಡಿದ್ದಾರೆ’ ಎನ್ನುವುದು ನಾಯಕನಟಿ ಖುಷಿ ಮಾತು. ಶ್ರೀಕಾಂತ್‌ ಸ್ವತಂತ್ರ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಗಿರಿ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಇದ್ದಾರೆ. ಸದ್ಯದಲ್ಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಶುರುವಾಗಲಿದ್ದು, ಮುಂದಿನ ಅಪ್‌ಡೇಟ್ಸ್‌ ನೀಡುವುದಾಗಿ ನಿರ್ಮಾಪಕರು ಹೇಳುತ್ತಾರೆ.

LEAVE A REPLY

Connect with

Please enter your comment!
Please enter your name here