ಮಹೇಶ್‌ ಬಾಬು ನಿರ್ದೇಶನದ ನೂತನ ಸಿನಿಮಾ ತಂಡಕ್ಕೆ ಅಮೃತಾ ಪ್ರೇಮ್‌ ಸೇರ್ಪಡೆಗೊಂಡಿದ್ದಾರೆ. ‘ಟಗರು ಪಲ್ಯ’ ಸಿನಿಮಾ ಖ್ಯಾತಿಯ ಅಮೃತಾ ಅವರಿಲ್ಲಿ smile guru ರಕ್ಷಿತ್‌ಗೆ ಜೋಡಿ. ಸಿನಿಮಾದ ಮುಖ್ಯ ಕಲಾವಿದರಿಗೆ ನಿರ್ದೇಶಕ ಮಹೇಶ್‌ ಬಾಬು ಹದಿನೈದು ದಿನಗಳ ವರ್ಕ್‌ಶಾಪ್‌ ಮಾಡಿದ್ದಾರೆ. ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸಿನಿಮಾಗೆ ಮುಹೂರ್ತ ನೆರವೇರಲಿದ್ದು, ಶೂಟಿಂಗ್‌ಗೆ ಚಾಲನೆ ಸಿಗಲಿದೆ.

Silver screenಗೆ ಎಂಟ್ರಿ ಕೊಡುತ್ತಿರುವ smile guru ರಕ್ಷಿತ್‌ಗೆ ಜೋಡಿಯಾಗಿ ಅಮೃತಾ ಪ್ರೇಮ್‌ ನಟಿಸುತ್ತಿದ್ದಾರೆ. ‘ಟಗರು ಪಲ್ಯ’ ಖ್ಯಾತಿಯ ನಟಿಗೆ ಇದು ಎರಡನೇ ಸಿನಿಮಾ. ಮಹೇಶ್‌ ಬಾಬು ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮತ್ತೊಬ್ಬ ನಾಯಕಿ ಜೆರುಶಾ. ಸುದೀಪ್‌ ನಟನೆಯ ‘ವೀರ ಮದಕರಿ’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಜೆರುಶಾ ಈ ಚಿತ್ರದಲ್ಲಿ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ. ಸಿನಿಮಾಗೆ smile guru ರಕ್ಷಿತ್‌ ಅವರೇ ಕತೆ ಬರೆದಿದ್ದಾರೆ ಎನ್ನುವುದು ವಿಶೇಷ. ಇನ್ನು ನಿರ್ದೇಶಕ ಮಹೇಶ್‌ ಬಾಬು ಅವರು ಶೂಟಿಂಗ್‌ಗೆ ಮುನ್ನ ರಕ್ಷಿತ್‌, ಅಮೃತಾ ಮತ್ತು ಜೆರುಶಾ ಅವರಿಗೆ 15 ದಿನಗಳ acting ವರ್ಕ್‌ಶಾಪ್‌ ಮಾಡಿದ್ದಾರೆ.

‘ಮೂವರಿಗೂ ಸಿನಿಮಾದ ಪಾತ್ರಗಳನ್ನು ಅರ್ಥ ಮಾಡಿಕೊಳ್ಳಲು ಈ ವರ್ಕ್‌ಶಾಪ್‌ ನೆರವಾಯ್ತು. ಈ ಸಿನಿಮಾದ ಪಾತ್ರಗಳ ಚಿತ್ರಣ ಹೇಗಿರುತ್ತದೆ ಎನ್ನುವುದರ ಬಗ್ಗೆ ನಿರ್ದೇಶಕ ಮಹೇಶ್‌ ಬಾಬು ಸರ್‌ ಸೂಕ್ಷ್ಮವಾಗಿ ಹೇಳಿಕೊಟ್ಟರು. ಇದರಿಂದ ನಾವೀಗ ಹೆಚ್ಚು ಆತ್ಮವಿಶ್ವಾಸದಿಂದ ಕ್ಯಾಮೆರಾ ಎದುರಿಸಬಹುದಾಗಿದೆ’ ಎನ್ನುತ್ತಾರೆ ರಕ್ಷಿತ್‌. ಇನ್ನು ‘ಟಗರು ಪಲ್ಯ’ ಚಿತ್ರದ ಗೆಲುವಿನೊಂದಿಗೆ ಸ್ಯಾಂಡಲ್‌ವುಡ್‌ಗೆ ಪರಿಚಯವಾದ ಅಮೃತಾರ ಮುಂದಿನ ನಡೆಯ ಬಗ್ಗೆ ಕುತೂಹಲವಿತ್ತು. ಮಹೇಶ್‌ ಬಾಬು ಅವರಂತಹ ಅನುಭವಿ ನಿರ್ದೇಶಕರ ಸಿನಿಮಾ ಅವರಿಗೆ ಒದಗಿಬಂದಿದೆ. ಮತ್ತೊಬ್ಬ ನಾಯಕಿ ಜೆರುಶಾ ಅವರಿಗೂ ಈ ಪ್ರಾಜೆಕ್ಟ್‌ ಒಂದೊಳ್ಳೆಯ ಬ್ರೇಕ್‌ ನೀಡುವ ಸಾಧ್ಯತೆಗಳಿವೆ.

ಎಂಎಂಎಂ ಪಿಕ್ಚರ್ಸ್‌ ಮತ್ತು ಎ ಕ್ಲಾಸ್‌ ಸಿನಿ ಫಿಲಂಸ್‌ ಬ್ಯಾನರ್‌ಗಳಡಿ ಅನುರಾಗ್‌ ಆರ್‌ ಮತ್ತು ಮಿಥುನ್‌ ಕೆ ಎಸ್‌ ಜೊತೆಗೂಡಿ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾ ಕೊಡಬೇಕು ಎನ್ನುವುದು ಅವರ ಉದ್ದೇಶ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಸತ್ಯ ಛಾಯಾಗ್ರಹಣ, ಸತೀಶ್‌ ಚಂದ್ರಯ್ಯ ಸಂಕಲನ ಚಿತ್ರಕ್ಕೆ ಇರಲಿದೆ. ಯಶಸ್ವೀ ಪ್ರದರ್ಶನ ಕಾಣುತ್ತಿರುವ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾಗೆ ಸಂಭಾಷಣೆ ಬರೆದಿದ್ದ ವಿಜಯ್‌ ಈಶ್ವರ್‌ ಅವರೇ ಈ ಸಿನಿಮಾಗೆ ಡೈಲಾಗ್ಸ್‌ ಬರೆಯುತ್ತಿದ್ದಾರೆ. Actorsಗೆ ವರ್ಕ್‌ಶಾಪ್‌ ಮುಗಿದಿದ್ದು ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸಿನಿಮಾಗೆ ಮುಹೂರ್ತ ನೆರವೇರಲಿದ್ದು, ಶೂಟಿಂಗ್‌ಗೆ ಚಾಲನೆ ಸಿಗಲಿದೆ.

LEAVE A REPLY

Connect with

Please enter your comment!
Please enter your name here