ಆರ್‌ ರವೀಂದ್ರ ನಿರ್ದೇಶನದ ‘ಗೋಪಿಲಾಲ’ ಸಿನಿಮಾದ ‘ನಿನ್ನೆ ನಿನ್ನೆ ನೆಚ್ಚಿಕೊಂಡು’ ಸಾಂಗ್‌ ಬಿಡುಗಡೆಯಾಗಿದೆ. ಜಯಂತ ಕಾಯ್ಕಿಣಿ ರಚನೆಯ ಹಾಡಿಗೆ ಮಿಥುನ್‌ ಅಶೋಕನ್‌ ಸಂಗೀತ ಸಂಯೋಜಿಸಿದ್ದು, ರಾಜೇಶ್‌ ಕೃಷ್ಣನ್‌ ಮತ್ತು ಅನುರಾಧ ಭಟ್‌ ಹಾಡಿದ್ದಾರೆ.

ಮಂಜುನಾಥ್‌ ಅರಸು ಮತ್ತು ನಿಮಿಷಾ ಕೆ ಚಂದ್ರ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಗೋಪಿಲೋಲ’ ಸಿನಿಮಾದ ‘ನಿನ್ನೆ ನಿನ್ನೆ ನೆಚ್ಚಿಕೊಂಡು’ ಸಾಂಗ್‌ ಬಿಡುಗಡೆಯಾಗಿದೆ. ಹಿರಿಯ ಚಿತ್ರನಿರ್ದೇಶಕ ಎಸ್‌ ವಿ ರಾಜೇಂದ್ರಸಿಂಗ್‌ ಬಾಬು ಮತ್ತು ಚಿತ್ರನಿರ್ಮಾಪಕ ಉಮೇಶ್‌ ಬಣಕಾರ ಸಾಂಗ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಜಯಂತ ಕಾಯ್ಕಿಣಿ ರಚನೆಯ ಹಾಡಿಗೆ ಮಿಥುನ್‌ ಅಶೋಕನ್‌ ಸಂಗೀತ ಸಂಯೋಜಿಸಿದ್ದು, ರಾಜೇಶ್‌ ಕೃಷ್ಣನ್‌ ಮತ್ತು ಅನುರಾಧ ಭಟ್‌ ಹಾಡಿದ್ದಾರೆ. ಚಿತ್ರದ ಹೀರೋ ಮಂಜುನಾಥ್ ಅರಸು ಮತ್ತು ನಾಯಕಿ ನಿಮಿಷಾ ಕೆ ಚಂದ್ರ ಅವರ ಮೇಲೆ ಈ ಮೆಲೋಡಿ ಸಾಂಗ್‌ ಪಿಕ್ಚರೈಸ್‌ ಆಗಿದೆ. ಈ ಹಿಂದೆ ಕನ್ನಡದಲ್ಲಿ ಛಲಗಾರ, ಸರ್ಕಾರಿ ಕೆಲಸ ದೇವರ ಕೆಲಸ, ಮನಸ್ಸಿನಾಟ, ಬಂಗಾರದ ಮಕ್ಕಳು ಹಾಗೂ ಮರಾಠಿಯಲ್ಲಿ ಫೆಬ್ರವರಿ 14, ಮಿಷನ್ ಅಂಬ್ಯುಲೆನ್ಸ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಆರ್ ರವೀಂದ್ರ ಅವರ ನಿರ್ದೇಶನದ ಚಿತ್ರವಿದು.

ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಚಿತ್ರನಿರ್ದೇಶಕ ಎಸ್‌ ವಿ ರಾಜೇಂದ್ರಸಿಂಗ್‌ ಬಾಬು, ‘ಒಂದು ಸುಂದರ ಹಾಡಿನ ಹಿಂದೆ ಎಷ್ಟೊಂದು ಜನ ಕೆಲಸ ಮಾಡಿರುತ್ತಾರೆ! ಈ ಹಾಡನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಲೋಕೇಷನ್ ಬ್ಯೂಟಿಫುಲ್‌. ನಟನೆ ಓವರ್ ಆಗಿ ಮಾಡದೇ ಹಾಡಿಗೆ ಎಷ್ಟು ಬೇಕೋ‌ ಅಷ್ಟೂ ಮಾಡಿದ್ದಾರೆ. ನಿರ್ದೇಶಕರು, ಕೊರಿಯೋಗ್ರಫರ್ ಎಲ್ಲರೂ ಅದ್ಭುತ ಕೆಲಸ ಮಾಡಿದ್ದಾರೆ. ಎಲ್ಲಿಯೂ ಹೊಸಬರು ಎನ್ನುವಂತೆ ಕಾಣುವುದಿಲ್ಲ’ ಎಂದರು. ಸಹಜ ಕೃಷಿ ಕುರಿತು ಪ್ರಸ್ತಾಪವಿರುವ ಪ್ರೇಮ ಕಥಾಹಂದರದ ಚಿತ್ರವನ್ನು ಎಸ್‌ ಆರ್‌ ಸನತ್‌ ಕುಮಾರ್‌ ನಿರ್ಮಿಸಿದ್ದಾರೆ. ಜಾಹ್ನವಿ, ಎಸ್ ನಾರಾಯಣ್, ಪದ್ಮಾ ವಾಸಂತಿ, ಕೆಂಪೇಗೌಡ, ಡಿಗ್ರಿ ನಾಗರಾಜ್, ರೇಖಾ ದಾಸ್, ನಾಗೇಶ್ ಯಾದವ್, ಸ್ವಾತಿ, ಹಿರಿಯ ನಿರ್ದೇಶಕ ಜೋಸೈಮನ್ ಸೇರಿದಂತೆ ತೆಲುಗು ನಟ ಸಪ್ತಗಿರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ಕೇಶವಚಂದ್ರ ಚಿತ್ರಕಥೆ ಮತ್ತು ಸಂಭಾಷಣೆ, ಕೆ ಎಂ ಪ್ರಕಾಶ್ ಸಂಕಲನ, ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಸೂರ್ಯಕಾಂತ್ ಎಚ್ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಮತ್ತು ಜಾನಿ ಮಾಸ್ಟರ್ ಸಾಹಸ ನಿರ್ದೇಶನವಿದೆ.

LEAVE A REPLY

Connect with

Please enter your comment!
Please enter your name here