ಕಿರಣ್‌ ರಾಜ್‌ ಅಭಿನಯದ ‘ರಾನಿ’ ಸಿನಿಮಾದ ‘ಹವಮಾನವೆ ಸುಂದರ ಸುಂದರ’ ಲಿರಿಕಲ್‌ ಸಾಂಗ್‌ ಬಿಡುಗಡೆಯಾಗಿದೆ. ಪ್ರಮೋದ್‌ ಮರವಂತೆ ರಚಿರಿಸುವ ಈ ಹಾಡಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಕುನಾಲ್‌ ಗಾಂಜಾವಾಲಾ ಮತ್ತು ಹಂಸಿಕಾ ಅಯ್ಯರ್‌ ಹಾಡಿಗೆ ದನಿಯಾಗಿದ್ದಾರೆ.

ಕಿರುತೆರೆಯ ಜನಪ್ರಿಯ ನಟ ಕಿರಣ್‌ ರಾಜ್‌ ಈಗ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ‘ರಾನಿ’ ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಮೊನ್ನೆ ಕಿರಣ್‌ ರಾಜ್‌ ಬರ್ತ್‌ಡೇಗೆ ಚಿತ್ರದ ‘ಹವಮಾನವೆ ಸುಂದರ ಸುಂದರ’ ಲಿರಿಕಲ್‌ ವೀಡಿಯೋ ಸಾಂಗ್‌ ರಿಲೀಸ್‌ ಆಗಿದೆ. ಪ್ರಮೋದ್‌ ಮರವಂತೆ ರಚಿರಿಸುವ ಈ ಹಾಡಿಗೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜಿಸಿದ್ದಾರೆ. ಕುನಾಲ್‌ ಗಾಂಜಾವಾಲಾ ಮತ್ತು ಹಂಸಿಕಾ ಅಯ್ಯರ್‌ ಹಾಡಿಗೆ ದನಿಯಾಗಿದ್ದಾರೆ. ಕಿರಣ್‌ ರಾಜ್‌ ಮತ್ತು ರಾಧ್ಯ ಅವರ ಮೇಲೆ ಹಾಡು ಪಿಕ್ಚರೈಸ್‌ ಆಗಿದೆ. ನಿರ್ದೇಶಕ ಗುರುತೇಜ್‌ ಶೆಟ್ಟಿ ಈ ರೊಮ್ಯಾಂಟಿಕ್‌ ಹಾಡನ್ನು ಸುಂದರ ಲೊಕೇಶನ್‌ಗಳಲ್ಲಿ ಚಿತ್ರಿಸಿದ್ದಾರೆ.

ಸಾಂಗ್‌ ರಿಲೀಸ್‌ ಇವೆಂಟ್‌ನಲ್ಲಿ ಮತನಾಡಿದ ಕಿರಣ್‌ ರಾಜ್‌, ‘ಒಂದು ಹಂತದಲ್ಲಿ ನನಗೆ ಜೀವನದಲ್ಲಿ ಮುಂದೇನು ಎಂಬ ಪ್ರಶ್ನೆ ಎದುರಾಗಿತ್ತು. ಆಗ ನನಗೆ, ‘ರಾನಿ’ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರು ಸಿಕ್ಕರು. ನನಗೂ ಈ ಚಿತ್ರದ ಕತೆ ಇಷ್ಟವಾಯಿತು. ಚಿತ್ರದ ಕತೆ ಕಾಲ್ಪನಿಕವಾದರೂ, ಪ್ರತಿಯೊಬ್ಬರಿಗೂ ನನ್ನ ಪಾತ್ರ ಆಪ್ತವಾಗುತ್ತದೆ‌. ದುಬಾರಿ ಬಜೆಟ್‌ನ ಚಿತ್ರವಿದು. ಕಿರಣ್‌ ರಾಜ್‌ ಸಿನಿಮಾಗೆ ಯಾಕೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರೆ ಎಂದು ಕೆಲವರು ಖಂಡಿತ ನಿರ್ಮಾಪಕರನ್ನು ಪ್ರಶ್ನೆ ಮಾಡಿರುತ್ತಾರೆ. ಆದರೆ, ನಮ್ಮ ನಿರ್ಮಾಪಕರು ವ್ಯಕ್ತಿಗಿಂತ ವ್ಯಕ್ತಿತ್ವಕ್ಕೆ ಬೆಲೆ ಕೊಡುವವರು. ಹಾಗಾಗಿ, ಹಣಕಾಸಿನ ವಿಚಾರಕ್ಕಿಂತ ಒಳ್ಳೆಯ ಸಿನಿಮಾ ಆಗಬೇಕೆಂದು ಈ ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ’ ಎಂದಿದ್ದಾರೆ.

‘ಇದು ಆ್ಯಕ್ಷನ್‍ ಪ್ಯಾಕೇಜ್‌ ಆದ್ರೂ, ಪಕ್ಕಾ ಕೌಟುಂಬಿಕ ಸಿನಿಮಾ. ಈ ಹಿಂದೆ ನೀವು ನೋಡಿರದ ಕಿರಣ್ ರಾಜ್ ಅವರನ್ನು ‘ರಾನಿ’ ಚಿತ್ರದಲ್ಲಿ ನೋಡಬಹುದು‌. ಆರು ಆಕ್ಷನ್ ಸನ್ನಿವೇಶಗಳಿದೆ. ಸೆಂಟಿಮೆಂಟ್‍ ಸಹ ಸ್ವಲ್ಪ ಹೆಚ್ಚಾಗಿಯೇ ಇದೆ. ಆರು ಫೈಟ್‍ಗಳಿಗೂ ವಿನೋದ್‍ ಮಾಸ್ಟರ್ ಅವರೇ ಸಾಹಸ ನಿರ್ದೇಶನ ಮಾಡಿದ್ದಾರೆ’ ಎನ್ನುವುದು ನಿರ್ದೇಶಕ ಗುರುತೇಜ್‌ ಶೆಟ್ಟಿ ಅವರ ಮಾತು. ಚಂದ್ರಕಾಂತ್‌ ಪೂಜಾರಿ ಮತ್ತು ಉಮೇಶ್‌ ಹೆಗ್ಡೆ ನಿರ್ಮಾಣದ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಸಮೀಕ್ಷಾ ನಟಿಸಿದ್ದಾರೆ. ಇದೇ ಆಗಸ್ಟ್‌ 30ರಂದು ಸಿನಿಮಾ ತೆರೆಕಾಣಲಿದೆ.

LEAVE A REPLY

Connect with

Please enter your comment!
Please enter your name here