ಸನತ್‌ ನಟನೆಯ ‘ಒಲವೇ ಮಂದಾರ 2’ ಸಿನಿಮಾ ಸೆಪ್ಟೆಂಬರ್‌ 15ರಂದು ತೆರೆಕಾಣುತ್ತಿದೆ. ಎಸ್‌ ಆರ್‌ ಪಾಟೀಲ್‌ ನಿರ್ದೇಶನದ ಸಿನಿಮಾದ ನಾಯಕಿಯಾಗಿ ಪ್ರಜ್ಞಾ ಭಟ್‌ ನಟಿಸಿದ್ದಾರೆ. ಡಾ ಕಿರಣ್ ತೋಟಂಬೈಲ್ ಸಂಗೀತ ಚಿತ್ರಕ್ಕಿದೆ.

ಎಸ್‌ ಆರ್‌ ಪಾಟೀಲ್‌ ನಿರ್ದೇಶನದ ‘ಒಲವೇ ಮಂದಾರ 2’ ಸಿನಿಮಾ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಸನತ್‌ ನಾಯಕನಾಗಿ ನಟಿಸಿದ್ದಾರೆ. 2011ರಲ್ಲಿ ತೆರೆಕಂಡಿದ್ದ ಜಯತೀರ್ಥ ಅವರ ಮೊದಲ ಸಿನಿಮಾ ‘ಒಲವೇ ಮಂದಾರ’ ಯಶಸ್ವಿಯಾಗಿತ್ತು. ಒಂದು ಸುಂದರ ಪ್ರೇಮಕಥೆ ಹೊಂದಿದ್ದ ಆ ಸಿನಿಮಾ ನಿರ್ದೇಶಕ ಜಯತೀರ್ಥ ಅವರಿಗೂ ಹೆಸರನ್ನು ತಂದುಕೊಟ್ಟಿತ್ತು. ‘ಒಲವೇ ಮಂದಾರ 2 ಸಿನಿಮಾದಲ್ಲಿ ಪರಿಶುದ್ಧ ಪ್ರೇಮಕಥೆ ಇದೆ. ಪ್ರಪಂಚದಲ್ಲಿ ಪ್ರೀತಿ ಮಾಡುವ ಮಕ್ಕಳನ್ನು ಅವರ ತಂದೆ – ತಾಯಿ ಅಪರಾಧಿಗಳಂತೆ ನೋಡುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳನ್ನು ಇನ್ನೂ ತಪ್ಪಿತಸ್ಥರನ್ನಾಗಿ ನೋಡಲಾಗುತ್ತದೆ. ಇದು ತಪ್ಪು. ಒಬ್ಬರನ್ನೊಬ್ಬರು ಅರಿತು ಮಾಡುವ ಪ್ರೀತಿ ಯಾವತ್ತೂ ತಪ್ಪಲ್ಲ. ಹಾಗೆ ಪ್ರೀತಿ ಮಾಡಿದವರು ಕೊನೆಯ ಕ್ಷಣದವರೆಗೂ ತಮ್ಮ ಪ್ರೀತಿಯನ್ನು ಅವರ ತಂದೆ ತಾಯಿಗೆ ಹೇಳಿ ಒಪ್ಪಿಸಲು ಪ್ರಯತ್ನಿಸಬೇಕೇ ಹೊರತು ಬೇರೆ ನಿರ್ಧಾರ ತೆಗೆದುಕೊಳ್ಳಬಾರದು ಎಂಬ ಸಂದೇಶ ಈ ಚಿತ್ರದಲ್ಲಿದೆ. ನನಗೆ ಈ ಹಿಂದೆ ತೆರೆಕಂಡಿದ್ದ ‘ಒಲವೇ ಮಂದಾರ’ ಚಿತ್ರ ತುಂಬ ಇಷ್ಟ. ಹಾಗಾಗಿ ಈ ಶೀರ್ಷಿಕೆ ಇಟ್ಟಿದ್ದೇನೆ. ಆ ಸಿನಿಮಾಗೂ ನಮ್ಮ ಈ ಸಿನಿಮಾಗೂ ಯಾವುದೇ ಸಂಬಂಧ ಇಲ್ಲ. ನಮ್ಮ ಚಿತ್ರದ ಕಥೆಯೇ ಬೇರೆ’ ಎನ್ನುತ್ತಾರೆಸಿನಿಮಾದ ನಿರ್ದೇಶಕ ಎಸ್‌ ಆರ್‌ ಪಾಟೀಲ್‌.

ನಟ ಸನತ್‌ ಅವರು ‘ಕಮರೊಟ್ಟು ಚೆಕ್‌ ಪೋಸ್ಟ್‌’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಅವರಿಗೆ ಇದು ಎರಡನೇ ಚಿತ್ರ. ‘ಸಿನಿಮಾರಂಗದಲ್ಲಿ ಹೀರೋ ಆಗಬೇಕು ಎಂಬುದು ನನ್ನಂತಹ ಮಧ್ಯಮ ವರ್ಗದ ಹುಡುಗನ ಕನಸು. ಇಂದು ಆ ಕನಸನ್ನು ನನಸಾಗಿಸಿದ ಎಲ್ಲರಿಗೂ ಧನ್ಯವಾದಗಳು. ನಮ್ಮ ನಿರ್ದೇಶಕರು ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಕೂಡ ತುಂಬ ಚೆನ್ನಾಗಿದೆ’ ಎಂದಿದ್ದಾರೆ. ರಮೇಶ್ ಮರಗೋಳ, ಬಿ ಎಂ ಸತೀಶ್, ಯಲ್ಲಾಲಿಂಗ ಮುಗುಟಿ, ರಾಮದೇವ್ ರಾಥೋಡ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದು,ಡಾ ಕಿರಣ್ ತೋಟಂಬೈಲ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ನಾಯಕಿಯಾಗಿ ನಟಿ ಪ್ರಜ್ಞಾ ಭಟ್‌ ಇದ್ದಾರೆ. ಅನುಪಾ ಸತೀಶ್‌, ಭವ್ಯಾ, ಡಿಂಗ್ರಿ ನಾಗರಾಜ, ಮಡೆನೂರ ಮನು, ಶಿವಾನಂದ ಸಿಂಧಗಿ ಚಿತ್ರದ ಇತರೆ ಪ್ರಮುಖ ಪಾತ್ರಧಾರಿಗಳು. ನಟಿಸಿದ್ದಾರೆ. ಸೆಪ್ಟೆಂಬರ್‌ 15 ರಂದು ಸಿನಿಮಾ ತೆರೆಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here