ಪವನ್‌ ಒಡೆಯರ್‌ ನಿರ್ಮಾಣದ ‘ವೆಂಕ್ಯಾ’ ನೂತನ ಸಿನಿಮಾ ಸೆಟ್ಟೇರಿದೆ. ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ. ‘ಡೊಳ್ಳು’ ಖ್ಯಾತಿಯ ಸಾಗರ್‌ ಪುರಾಣಿಕ್‌ ನಟಿಸಿ, ನಿರ್ದೇಶಿಸುತ್ತಿರುವ ಚಿತ್ರವಿದು. ‘ಇದು ಉತ್ತರ ಕರ್ನಾಟಕದ ಕಥೆಯಾದ್ರೂ, ದೇಶವನ್ನೆಲ್ಲಾ ಸುತ್ತಲಿದೆ’ ಎನ್ನುತ್ತಾರೆ ನಿರ್ದೇಶಕರು.

‘ಡೊಳ್ಳು’ ಸಿನಿಮಾ ನಂತರ ನಿರ್ಮಾಪಕ ಪವನ್‌ ಒಡೆಯರ್‌ ಮತ್ತು ನಿರ್ದೇಶಕ ಸಾಗರ್‌ ಪುರಾಣಿಕ್‌ ಮತ್ತೊಮ್ಮೆ ಜೊತೆಯಾಗಿದ್ದಾರೆ. ಈ ಬಾರಿ ಸಾಗರ್‌ ಪುರಾಣಿಕ್‌ ನಿರ್ದೇಶನದ ಜೊತೆ ಸಿನಿಮಾದ ನಾಯಕನಟನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ‘ವೆಂಕ್ಯಾ’ ಎಂದು ನಾಮಕರಣವಾಗಿದೆ. ಪವನ್‌ ಒಡೆಯರ್‌ ನಿರ್ಮಿಸಿ, ಸಾಗರ್‌ ಪುರಾಣಿಕ್‌ ನಟಿಸಿ – ನಿರ್ದೇಶಿಸುತ್ತಿರುವ ಸಿನಿಮಾಗೆ ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಮುಹೂರ್ತ ನೆರವೇರಿದೆ. ‘ವೆಂಕ್ಯಾ ಶೂಟಿಂಗ್ ಈಗಾಗಲೇ ಶುರುವಾಗಿದೆ. ಇದೊಂದು ವಿಭಿನ್ನ ಪ್ರಯತ್ನ. ಉತ್ತರ ಕರ್ನಾಟಕದ ಕಥೆಯಾದ್ರೂ ಅದು ದೇಶವನ್ನೆಲ್ಲಾ ಸುತ್ತಲಿದೆ. ಇದೊಂದು ಹೊಸ ಬಗೆಯ ಕಮರ್ಷಿಯಲ್ ಸಿನಿಮಾ’ ಎನ್ನುವುದು ನಿರ್ದೇಶಕರ ಮಾತು. ಚಿತ್ರದ ಇತರೆ ಕಲಾವಿದರು ಹಾಗೂ ತಂತ್ರಜ್ಞರ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ಮಾಪಕರು ಹೇಳುತ್ತಾರೆ.

ಪುನೀತ್‌ ರಾಜಕುಮಾರ್‌, ಯಶ್‌ ಅವರ ಸಿನಿಮಾಗಳನ್ನು ನಿರ್ದೇಶಿಸಿರುವ ಪವನ್‌ ಒಡೆಯರ್‌ ‘ಡೊಳ್ಳು’ ಚಿತ್ರದೊಂದಿಗೆ ನಿರ್ಮಾಪಕರಾದರು. ಇತ್ತೀಚಿನ ಬಿಗ್‌ಬಾಸ್‌ ಸೀಸನ್‌ 10ನಲ್ಲಿ ಗೆದ್ದ ಕಾರ್ತೀಕ್‌ ಮಹೇಶ್‌ ನಟಿಸಿದ್ದ ಚಿತ್ರವಿದು. ಸಾಗರ್‌ ಪುರಾಣಿಕ್‌ ನಿರ್ದೇಶನದ ಸಿನಿಮಾ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಸಾಕಷ್ಟು ಮನ್ನಣೆ, ಪ್ರಶಸ್ತಿಗಳನ್ನು ಪಡೆಯಿತು. ಇದೀಗ ಇಬ್ಬರೂ ಮತ್ತೊಮ್ಮೆ ಜೊತೆಯಾಗಿದ್ದಾರೆ. ಸಾಗರ್‌ ಪುರಾಣಿಕ್‌ ನಿರ್ದೇಶನದ ಜೊತೆ ನಟನೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಅಪೇಕ್ಷಾ ಒಡೆಯರ್ ಮತ್ತು ಪವನ್ ಒಡೆಯರ್ ಹಣ ಹಾಕುತ್ತಿರುವ ‘ವೆಂಕ್ಯಾ’ ಚಿತ್ರಕ್ಕೆ ಅವರ ಸ್ನೇಹಿತರಾದ ಅವಿನಾಶ್ ವಿ ರೈ ಮತ್ತು ಮೋಹನ್ ಲಾಲ್ ಮೆನನ್ ಸಹನಿರ್ಮಾಣವಿದೆ.

LEAVE A REPLY

Connect with

Please enter your comment!
Please enter your name here