ಬೆಂಗಳೂರಿನಲ್ಲಿ ನಿನ್ನೆ (ಸೆಪ್ಟೆಂಬರ್‌ 10) ರಾತ್ರಿ ನಡೆದ ಕಾರು ಅಪಘಾತದಲ್ಲಿ ಕಿರುತೆರೆ ಮತ್ತು ಸಿನಿಮಾ ನಟ ಕಿರಣ್‌ ರಾಜ್‌ ಅಸ್ವಸ್ಥರಾಗಿದ್ದಾರೆ. ನಾಳೆ ಅವರು ಹೀರೋ ಆಗಿ ನಟಿಸಿರುವ ‘ರಾನಿ’ ಸಿನಿಮಾ ತೆರೆಕಾಣುತ್ತಿದೆ. ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಳೆ ಸೆಪ್ಟೆಂಬರ್‌ 12ರಂದು ಕಿರಣ್‌ ರಾಜ್‌ ನಟನೆಯ ‘ರಾನಿ’ ಸಿನಿಮಾ ತೆರೆಕಾಣುತ್ತಿದೆ. ಚಿತ್ರತಂಡ ಪ್ರಚಾರಕಾರ್ಯದಲ್ಲಿ ನಿರತವಾಗಿತ್ತು. ಈ ಮಧ್ಯೆ ದುರದೃಷ್ಟವತಾಶ್‌ ಚಿತ್ರದ ಹೀರೋ ಕಿರಣ್‌ ರಾಜ್‌ ಕಾರು ಅಪಘಾತದಲ್ಲಿ ಅಸ್ವಸ್ಥರಾಗಿದ್ದಾರೆ. ನಿನ್ನೆ (ಸೆಪ್ಟೆಂಬರ್‌ 10) ರಾತ್ರಿ ಬೆಂಗಳೂರು ಗುಟ್ಟಯ್ಯನ ಪಾಳ್ಯದ ಸಿದ್ದೇಶ್ವರ ನಿರಾಶ್ರಿತರ ಕೇಂದ್ರಕ್ಕೆ ಕಿರಣ್‌ ರಾಜ್‌ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ‘ರಾನಿ’ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಗಿರೀಶ್‌ ಕಾರು ಚಲಾಯಿಸುತ್ತಿದ್ದರು. ಮುಂಗುಸಿಯೊಂದು ಕಾರಿಗೆ ಅಡ್ಡ ಬಂದಾಗ, ಅದನ್ನು ತಪ್ಪಿಸಲು ಹೋಗಿ ಗಿರೀಶ್‌ ಕಾರನ್ನು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆಸಿದ್ದಾರೆ.

ಆಕಸ್ಮಿಕದಲ್ಲಿ ಕಿರಣ್‌ ರಾಜ್‌ ಎದೆಯ ಭಾಗಕ್ಕೆ ಪೆಟ್ಟಾಗಿ ಅವರು ಪ್ರಜ್ಞೆ ಕಳೆದುಕೊಂಡಿದ್ದಾರೆ. ಕೂಡಲೇ ಅವರನ್ನು ಕೆಂಗೇರಿ ಬಳಿಯ ಬೆಂಗಳೂರು ಹಾಸ್ಪೆಟೆಲ್‌ಗೆ ಸೇರಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಾಹನ ಚಲಾಯಿಸುತ್ತಿದ್ದ ಗಿರೀಶ್‌ ಸೀಟ್‌ ಬೆಲ್ಟ್‌ ಧರಿಸಿದ್ದರಿಂದ ಅವರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ‘ಈ ಆಕಸ್ಮಿಕ ದುರದೃಷ್ಟಕರ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ನಾಳೆ ಅವರ ಸಿನಿಮಾ ತೆರೆಕಾಣಲಿದೆ’ ಎಂದು ‘ರಾನಿ’ ಸಿನಿಮಾದ PRO ವೆಂಕಟೇಶ್‌ ಅವರು ಹೇಳುತ್ತಾರೆ.

LEAVE A REPLY

Connect with

Please enter your comment!
Please enter your name here