ಹಿಂದೊಮ್ಮೆ ‘ಕಾದಲನ್‌’ ತಮಿಳು ಸಿನಿಮಾ ಮೂಲಕ ಭಾರತೀಯ ಸಿನಿಮಾರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ಎ ಆರ್‌ ರೆಹಮಾನ್‌ ಮತ್ತು ಪ್ರಭುದೇವ ಮತ್ತೆ ಜೊತೆಯಾಗುತ್ತಿದ್ದಾರೆ. ಮನೋಜ್‌ ಎನ್‌ ಎಸ್‌ ನಿರ್ದೇಶನದ ತಮಿಳು ಚಿತ್ರದಲ್ಲಿ ಪ್ರಭುದೇವ ನಟಿಸಲಿದ್ದು, ಚಿತ್ರಕ್ಕೆ ರೆಹಮಾನ್‌ ಸಂಗೀತ ಸಂಯೋಜಿಸಲಿದ್ದಾರೆ. ಯೋಗಿ ಬಾಬು, ಅಜು ವರ್ಗೀಸ್ ಮತ್ತು ಅರ್ಜುನ್ ಅಶೋಕನ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಇರಲಿದ್ದಾರೆ.

ಪ್ರಭುದೇವ ಮತ್ತು ಎ ಆರ್ ರೆಹಮಾನ್ 25 ವರ್ಷಗಳ ನಂತರ ಮತ್ತೆ ಒಂದಾಗುತ್ತಿದ್ದಾರೆ. ಡ್ಯಾನ್ಸ್, ಮ್ಯೂಸಿಕಲ್ ಚಲನಚಿತ್ರ ಎನ್ನಲಾಗುತ್ತಿರುವ ಈ ಸಿನಿಮಾವನ್ನು Behindwoods ನ ಸ್ಥಾಪಕ ಮತ್ತು CEO ಮನೋಜ್ ಎನ್ ಎಸ್ ನಿರ್ದೇಶಿಸಲಿದ್ದಾರೆ. ತ್ಕಾಲಿಕವಾಗಿ ‘ARRPD6’ ಎಂದು ಶೀರ್ಷಿಕೆ ಇಡಲಾದ ಈ ಸಿನಿಮಾ, Behindwoods ಸಂಸ್ಥೆಯ ಮೊದಲ ಚಿತ್ರ. ಸಿನಿಮಾ ಕುರಿತು ಮಾತನಾಡಿರುವ ನಿರ್ಮಾಪಕರು, ‘ಸಂಗೀತ, ನೃತ್ಯ, ಹಾಸ್ಯ ದೃಶ್ಯಗಳನ್ನು ಆಚರಿಸುವ ಮೂಲಕ ಎರಡು ಗಂಟೆಗಳ ಕಾಲ ಚಿತ್ರಮಂದಿರವನ್ನು ಅತ್ಯಂತ ಆನಂದದಾಯಕ ಸ್ಥಳವನ್ನಾಗಿಸುವುದು ನಮ್ಮ ಗುರಿಯಾಗಿದೆ. ಈ ಸಿನಿಮಾದಲ್ಲಿ ಯಾವುದೇ ರೀತಿಯ ರಕ್ತ ಅಥವಾ ಹಿಂಸಾತ್ಮಕ ದೃಶ್ಯಗಳು ಇರುವುದಿಲ್ಲ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇದೊಂದು ಹೆಗ್ಗುರಿತಿನ ಸಿನಿಮಾ ಆಗಲಿದೆ ಎಂಬ ವಿಶ್ವಾಸ ನಮಗಿದೆ’ ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ತಮಿಳು ನಟ ಯೋಗಿ ಬಾಬು ಮತ್ತು ಮಲಯಾಳಂ ನಟರಾದ ಅಜು ವರ್ಗೀಸ್ ಮತ್ತು ಅರ್ಜುನ್ ಅಶೋಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಇದೊಂದು pan India ಸಿನಿಮಾ ಆಗಲಿದೆ. ಚಲನಚಿತ್ರವು ಈ ವರ್ಷದ ಮೇ ತಿಂಗಳಿನಲ್ಲಿ ಚಿತ್ರೀಕರಣ ಆರಂಭಿಸಲಿದೆ ಮತ್ತು 2025ರಲ್ಲಿ ಬಿಡುಗಡೆಯಾಗಲಿದೆ. 1994ರಲ್ಲಿ ತೆರೆಕಂಡಿದ್ದ ಎಸ್‌ ಶಂಕರ್‌ ನಿರ್ದೇಶನದ, ಪ್ರಭುದೇವ, ನಗ್ಮಾ ಅಭಿನಯಿಸಿದ್ದ ‘ಕಾದಲನ್‌’ ತಮಿಳು ಸಿನಿಮಾ ಮತ್ತು 1997ರಲ್ಲಿ ತೆರೆಕಂಡಿದ್ದ ಪ್ರಭುದೇವ ಅವರ ‘ಮಿನ್ಸಾರ ಕನವು’ ಸಿನಿಮಾಗೆ ಎ ಆರ್‌ ರಹಮಾನ್‌ ಸಂಗೀತ ಸಂಯೋಜಿಸಿದ್ದರು. ರಾಜೀವ್‌ ಮೆನನ್‌ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅರವಿಂದ್‌ ಸ್ವಾಮಿ, ಕಾಜೋಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

LEAVE A REPLY

Connect with

Please enter your comment!
Please enter your name here