‘ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ವಿನಯ್‌ ಹೇಳಿದ್ದಾರೆ. ಸಾಮಾನ್ಯವಾಗಿ ಇಂಥ ಟೀಕೆಗಳಿಗೆ ತಣ್ಣಗೆ ಉತ್ತರಿಸುತ್ತಿದ್ದ ಡ್ರೋಣ್ ಪ್ರತಾಪ್ ಕೂಡ ಈ ಬಾರಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಧ್ವನಿ ಎತ್ತರಿಸಿ ವಿನಯ್‌ ವಿರುದ್ಧ ಮಾತನಾಡಿದ್ದಾರೆ.

ಹದಿನಾಲ್ಕನೇ ವಾರಕ್ಕೆ ಬಿಗ್‌ಬಾಸ್ ಕನ್ನಡ ಕಾಲಿಟ್ಟಿದೆ. ಕಳೆದ ವಾರ ಮೈಕಲ್‌ ಅವರೂ ಎಲಿಮಿನೇಟ್ ಆಗಿದ್ದಾರೆ. ಹದಿನಾಲ್ಕನೇ ವಾರದ ಆರಂಭ ಬಿಸಿಬಿಸಿಯಾಗಿಯೇ ಆರಂಭವಾಗಿದೆ. JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಇದರ ಸುಳಿವು ದೊರಕಿದೆ. ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ವಿನಯ್‌ ಅವರು ಪ್ರತಾಪ್ ವಿರುದ್ಧ ಹರಿಹಾಯ್ದಿದ್ದಾರೆ. ‘ಅಮಾಯಕನ ಹಾಗೆ ವೇಷ ಹಾಕಿಕೊಂಡು, ಎಲ್ಲರಿಗೂ ಬೂದಿ ಎರೆಚಿಕೊಂಡು ಇರುವುದೆಂದರೆ ಅದು ಪ್ರತಾಪ್’ ಎಂದು ಅವರು ಹೇಳಿದ್ದಾರೆ. ಸಾಮಾನ್ಯವಾಗಿ ಇಂಥ ಟೀಕೆಗಳಿಗೆ ತಣ್ಣಗೆ ಉತ್ತರಿಸುತ್ತಿದ್ದ ಡ್ರೋಣ್ ಪ್ರತಾಪ್ ಕೂಡ ಈ ಬಾರಿ ಗರಂ ಆಗಿದ್ದಾರೆ. ಅಷ್ಟೇ ಅಲ್ಲ, ಧ್ವನಿ ಎತ್ತರಿಸಿ ವಿನಯ್‌ ವಿರುದ್ಧ ಮಾತಾಡಿದ್ದಾರೆ.

‘ನೀವು ಅಂದ ಹಾಗೆಲ್ಲ ಅನ್ನಿಸಿಕೊಂಡು ಇರುವುದಕ್ಕೆ ಸಾಧ್ಯವಿಲ್ಲ. ಪರಿಣಾಮ ನೆಟ್ಟಗಿರುವುದಿಲ್ಲ’ ಎಂದು ಮಾರುತ್ತರ ನೀಡಿದ್ದಾರೆ. ವಿನಯ್, ‘ನೀನು ಆಡ್ತಿರೋ ನಾಟಕ ನಂಗೆ ಗೊತ್ತಿಲ್ವೇನೋ? ಏನೋ ಮಾಡ್ತೀಯಾ ನೀನು?’ ಎಂದು ಕೂಗಾಡಿದ್ದಾರೆ. ಪ್ರತಾಪ್ ಕೂಡ ಅಷ್ಟೇ ದೊಡ್ಡದಾಗಿ, ‘ನೀಟಾಗಿ ಮಾತಾಡೋದು ಕಲ್ತುಕೊಳ್ಳಿ. ನಾನು ಮಾತುಗಳ ಮುಖಾಂತರ ಉತ್ತರ ಕೊಡ್ತೀನಿ’ ಎಂದು ಹೇಳಿದ್ದಾರೆ. ವಿನಯ್, ‘ನೀನು ನನಗೆ ಹೇಳಿಕೊಡಬೇಕಾಗಿಲ್ಲ. ಹೋಗಲೇ’ ಎಂದಿದ್ದಾರೆ. ಸಂಗೀತಾ ಮತ್ತು ತುಕಾಲಿ ಸಂತೋಷ್‌ ಎಲ್ಲರೂ ಸೇರಿಕೊಂಡು ಜಗಳ ತಪ್ಪಿಸಲು ಯತ್ನಿಸುತ್ತಿರುವ ದೃಶ್ಯ ಪ್ರೋಮೊದಲ್ಲಿ ಸೆರೆಯಾಗಿದೆ. ಹಾಗಾದರೆ ಈ ವಾರ ವಿನಯ್ ಮತ್ತು ಪ್ರತಾಪ್‌ ನಡುವಿನ ಯುದ್ಧಕ್ಕೆ ಸಾಕ್ಷಿಯಾಗಲಿದೆಯಾ? ಹಾಗಾದಲ್ಲಿ ಉಳಿದ ಸದಸ್ಯರು ಯಾರ ಪರ ನಿಲ್ಲುತ್ತಾರೆ? ಫಿನಾಲೆಗೆ ಕೆಲವೇ ಹೆಜ್ಜೆಗಳ ದೂರದಲ್ಲಿರುವಾಗ ಮತ್ತೆ ಏರುತ್ತಿರುವ ಕಾವು ಮನೆಯ ಪರಿಸ್ಥಿತಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ಯಲಿದೆ? ಈ ಎಲ್ಲಾ ಪ್ರಶ್ನೆಗಳಿಗೆ ಈ ವಾರದ ಎಪಿಸೋಡ್‌ಗಳು ಉತ್ತರವಾಗಲಿವೆ.

LEAVE A REPLY

Connect with

Please enter your comment!
Please enter your name here