ಸ್ಯಾಂಡಲ್‌ವುಡ್‌ ಯುವನಟ ಧನ್ವೀರ್‌ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್‌ಡೇ ದಿನ ಅವರ ನೂತನ ಸಿನಿಮಾ ಘೋಷಣೆಯಾಗಿದೆ. ಸಮೃದ್ಧಿ ಫಿಲಂಸ್‌ ಬ್ಯಾನರ್‌ನಡಿ ತಯಾರಾಗುತ್ತಿರುವ ಈ ಚಿತ್ರವನ್ನು ರಘುಕುಮಾರ್‌ ಓ ಆರ್‌ ನಿರ್ದೇಶಿಸಲಿದ್ದಾರೆ.

‘ವಾಮನ’ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿರುವ ಧನ್ವೀರ್‌ ಇದೀಗ ಹೊಸ ಸಿನಿಮಾಗೆ ಸಿದ್ಧತೆ ನಡೆಸಿದ್ದಾರೆ. ಇಂದು ಅವರ ಬರ್ತ್‌ಡೇ. ಹುಟ್ಟುಹಬ್ಬದ ಅಂಗವಾಗಿ ಅವರ ನೂತನ ಸಿನಿಮಾ ಘೋಷಣೆಯಾಗಿದೆ. ಇದು ಅವರ ಐದನೇ ಸಿನಿಮಾ. ಸಮೃದ್ಧಿ ಫಿಲಂಸ್‌ ಬ್ಯಾನರ್‌ನಡಿ ತಯಾರಾಗಲಿರುವ ಚಿತ್ರವನ್ನು ರಘುಕುಮಾರ್‌ ಓ ಆರ್‌ ಅವರು ನಿರ್ದೇಶಿಸಲಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ. ಇದು ರಘುಕುಮಾರ್ ನಿರ್ದೇಶನದ ಚೊಚ್ಚಲ ಚಿತ್ರ. ಅವರೇ ಕತೆ ರಚಿಸಿದ್ದಾರೆ. ರಂಗಾಯಣ ರಘು , ರವಿಶಂಕರ್, ತಬಲಾನಾಣಿ, ಸಾಧುಕೋಕಿಲ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ.

ನಿರ್ದೇಶಕ ರಘುಕುಮಾರ್ ಓ ಆರ್ ಕೆಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇವರು ‘ಕೋಟಿಗೊಬ್ಬ 3’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದಾರೆ. ರಘುಕುಮಾರ್‌ ನಿರ್ಮಿಸಿ, ನಿರ್ದೇಶಿಸಿರುವ ‘ದಿ ಬೆಲ್’ ಕಿರುಚಿತ್ರ ಪಿಆರ್‌ಕೆ ಆಡಿಯೋ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಶಾರ್ಟ್‌ ಫಿಲ್ಮ್‌ ಫೆಸ್ಟಿವಲ್‌ಗಳಲ್ಲಿ ಮನ್ನಣೆ ಗಳಿಸಿದೆ. ಕಾರ್ತಿಕ್ ಎಸ್ ಛಾಯಾಗ್ರಹಣ, ಜ್ಯೂಡಾ ಸ್ಯಾಂಡಿ ಸಂಗೀತ, ವಿನ್ಯಾಸ ರಾಜನ್‌ ಶಬ್ಧ ವಿನ್ಯಾಸ, ಉಮೇಶ್‌ ಆರ್‌ ಬಿ ಸಂಕಲನ ಚಿತ್ರಕ್ಕಿರಲಿದೆ.

LEAVE A REPLY

Connect with

Please enter your comment!
Please enter your name here