‘ಕ್ರಾಂತಿ’ ಸಿನಿಮಾ ನಂತರ ದರ್ಶನ್‌ ಅಭಿನಯದ ಚಿತ್ರ ‘ಕಾಟೇರ’. ‘ಕ್ರಾಂತಿ’ ಬಾಕ್ಸಾಫೀಸ್‌ನಲ್ಲಿ ತಕ್ಕಮಟ್ಟಿಗೆ ಗಳಿಕೆ ಮಾಡಿತ್ತು. ಆದರೆ, ತರುಣ್‌ ಸುಧೀರ್‌ ನಿರ್ದೇಶನದ ‘ಕಾಟೇರ’ ಈ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಗಳಿಕೆ ಮಾಡಿದ ಚಿತ್ರದ ಯಶಸ್ಸನ್ನು ಚಿತ್ರತಂಡ ವಿಶೇಷವಾಗಿ ಸಂಭ್ರಮಿಸಿದೆ.

ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾ ಬ್ಲಾಕ್‌ಬಸ್ಟರ್‌ ಹಿಟ್‌ ಆಗಿದ್ದು, ಶತದಿನಗಳನ್ನ ಪೂರೈಸಿದೆ. ನೂರು ದಿನಗಳಲ್ಲೇ ಕೋಟಿ ಕೋಟಿ ಗಳಿಕೆ ಮಾಡಿರುವ ಸಿನಿಮಾ 2023ರ ಡಿಸೆಂಬರ್​ 29ರಂದು ಬಿಡುಗಡೆಯಾಗಿತ್ತು. ಸಿನಿಮಾದ ಕಥೆ ಹಾಗೂ ಡೈಲಾಗ್ಸ್‌ ಚಿತ್ರದ ಹೈಲೈಟ್‌. 100 ದಿನಗಳ ಯಶಸ್ವಿ ಪ್ರದರ್ಶನ ಕಂಡು ದಾಖಲೆ ಬರೆದ ಖುಷಿಯಲ್ಲಿ ಚಿತ್ರತಂಡದ ಮೂವರಿಗೆ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಕಾರು ಕೊಡಿಸಿದ್ದಾರೆ. ‘ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್​ ಅವರಿಗೆ ಕಾರು ನೀಡಲಾಗಿದೆ. ಕೆಲ ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸೂರಜ್, ನೋವಿನ ನಡುವೆಯೂ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನಟಿಸಿದ್ದರು.

ನಿನ್ನೆ ಸಂಜೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಡೀ ‘ಕಾಟೇರ’ ಚಿತ್ರತಂಡ ಭಾಗಿಯಾಗಿತ್ತು. ಕಾರ್ಯಕ್ರಮದಲ್ಲಿ ಉಡುಗೊರೆಯಾಗಿ ಕೊಟ್ಟ ಹೊಸ ಕಾರುಗಳನ್ನು ನಟ ದರ್ಶನ್​ ಅವರು ಹೊಸ ಸ್ಟಾರ್ಟ್‌​ ಮಾಡುವ ಮೂಲಕ ಜಡೇಶ್​, ಮಾಸ್ತಿ ಮತ್ತು ಸೂರಜ್​ ಅವರಿಗೆ ಶುಭ ಕೋರಿದರು. ಇನ್ನು ದರ್ಶನ್‌ ಕೈಯಲ್ಲಿ ‘ಡೆವಿಲ್-ದಿ ಹೀರೊ’ ಎನ್ನುವ ಸಿನಿಮಾ ಇದೆ. ದರ್ಶನ್ ನಟನೆಯ 57ನೇ ಸಿನಿಮಾ ಇದಾಗಿದ್ದು, ಮಿಲನ ಪ್ರಕಾಶ್ ಕಾಂಬಿನೇಷನ್‌ನಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. 6 ವರ್ಷಗಳ ಹಿಂದೆ ಮಿಲನಾ ಪ್ರಕಾಶ್‌ ಜೊತೆಗೆ ದರ್ಶನ್ ‘ತಾರಕ್’ ಎಂಬ ಸಿನಿಮಾ ಮಾಡಿದ್ದರು. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೇನರ್ ಆಗಿದ್ದ ‘ತಾರಕ್‌’ ಸಿನಿಮಾ ಹಿಟ್‌ ಆಗಿತ್ತು.

LEAVE A REPLY

Connect with

Please enter your comment!
Please enter your name here