ಮೊಬೈಲ್‌ ಬರುವುದಕ್ಕೂ ಮುನ್ನ ಪ್ರೇಮಪತ್ರಗಳ ಮೂಲಕ ಪ್ರೀತಿ ನಿವೇದಿಸಿಕೊಂಡ ಯುವಕ – ಯುವತಿಯ ಕತೆ ‘ಕಾಗದ’. ರಂಜಿತ್‌ ನಿರ್ದೇಶನದ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಚಿತ್ರದೊಂದಿಗೆ ಆದಿತ್ಯ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಬಾಲನಟಿಯಾಗಿ ಸಿನಿಮಾಗೆ ಪರಿಚಯವಾಗಿದ್ದ ಅಂಕಿತಾ ಜಯರಾಂ ಈ ಚಿತ್ರದಲ್ಲಿ ನಾಯಕಿಯಾಗಿ ಬಡ್ತಿ ಪಡೆದಿದ್ದಾರೆ.

‘ಕಾಗದ, 2005ರಲ್ಲಿ ನಡೆದ ಪ್ರೇಮಕಥೆ. ಯುವಜನತೆಯ ಕೈಯಲ್ಲಿ ಇನ್ನೂ ಮೊಬೈಲ್‌ ಬಂದಿರದ, ಕಾಗದದಲ್ಲೇ ಪ್ರೀತಿ ವಿನಿಮಯವಾಗುತ್ತಿದ್ದ ಕಾಲಘಟ್ಟದ ಕಥೆಯೂ ಹೌದು. ಪರಸ್ಪರ ದ್ವೇಷಿಸುವ ಎರಡು ಹಳ್ಳಿಗಳ ನಡುವೆ ಅರಳಿದ ಪ್ರೇಮಕಥೆ ಇದು. ಇಂತಹ ಹಲವು ವಿಶೇಷಗಳ ಸಿನಿಮಾ’ ಎನ್ನುತ್ತಾರೆ ‘ಕಾಗದ’ ಚಿತ್ರದ ನಿರ್ದೇಶಕ ರಂಜಿತ್‌. ಈ ಹಿಂದೆ ‘ಆಪಲ್ ಕೇಕ್’ ಸಿನಿಮಾ ಮಾಡಿದ್ದ ಅವರಿಗಿದು ಎರಡನೇ ಪ್ರಯೋಗ. ವಿನೋದ್‌ ಪ್ರಭಾಕರ್‌ ಅಭಿನಯದ ‘ರಗಡ್‌’ ಸಿನಿಮಾ ಮಾಡಿದ್ದ ಅರುಣ್‌ ಕುಮಾರ್‌ ‘ಕಾಗದ’ ನಿರ್ಮಿಸಿದ್ದಾರೆ. ಅವರ ಪುತ್ರ ಆದಿತ್ಯ ಈ ಚಿತ್ರದ ನಾಯಕನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಬಾಲನಟಿಯಾಗಿ ಸಿನಿಮಾಗಳಲ್ಲಿ ಅಭಿನಯಿಸಿದ್ದ ಅಂಕಿತಾ ಜಯರಾಂ ‘ಕಾಗದ’ದಲ್ಲಿ ನಾಯಕನಟಿಯಾಗಿ ಬಡ್ತಿ ಪಡೆದಿದ್ದಾರೆ. ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದ್ದು, ಇದೇ ಜುಲೈ 5ರಂದು ‘ಕಾಗದ’ ಥಿಯೇಟರ್‌ಗೆ ಬರಲಿದೆ.

ನಿರ್ಮಾಪಕ ಅರುಣ್‌ ಕುಮಾರ್‌, ‘ನನಗೆ ಮೊದಲಿನಿಂದಲೂ ಹಿಂದು – ಮುಸ್ಲಿಂ ಲವ್ ಸ್ಟೋರಿ ಸಿನಿಮಾ ಮಾಡುವ ಆಸೆಯಿತ್ತು. ಆದರೆ ನನಗೆ ಮನಮುಟ್ಟುವ ಕತೆ ಸಿಕ್ಕಿರಲಿಲ್ಲ. ಇಲ್ಲಿ ನಿರ್ದೇಶಕ ರಂಜಿತ್‌ ಒಂದೊಳ್ಳೆಯ ಕತೆ ಮಾಡಿದ್ದಾರೆ. ಈ ಚಿತ್ರದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ತರುವ ಸನ್ನಿವೇಶಗಳನ್ನು ತೋರಿಸಿಲ್ಲ. ಎಲ್ಲಕ್ಕಿಂತ ಮನುಷ್ಯತ್ವ ಮುಖ್ಯ ಎಂಬ ಸಂದೇಶ ತಿಳಿಸಿದ್ದೇವೆ’ ಎನ್ನುತ್ತಾರೆ. ‘ನಮ್ಮ ಮನೆಯ ಕೆಳಗಡೆ ಆಕ್ಟಿಂಗ್ ಸ್ಕೂಲ್ ಇತ್ತು. ಅಲ್ಲಿ ಕಲಿಯಲು ಬರುತ್ತಿದ್ದವರನ್ನು ನೋಡಿ‌ ನನಗೂ ನಟಿಸುವ ಆಸೆಯಾಯಿತು. ನಟನೆ ಕಲಿತು, ಕಿರುಚಿತ್ರ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ’ ಎಂದು ಚಿತ್ರದ ಹೀರೋ ಆದಿತ್ಯ ತಮಗಾಗಿ ಸಿನಿಮಾ ನಿರ್ಮಿಸಿರುವ ಅಪ್ಪನಿಗೆ ಧನ್ಯವಾದ ಹೇಳುತ್ತಾರೆ. ಪ್ರದೀಪ್‌ ವರ್ಮ ಸಂಗೀತ, ವೀನಸ್‌ ನಾಗರಾಜ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ವಿಶೇಷ ಪಾತ್ರದಲ್ಲಿ ನೇಹಾ ಪಾಟೀಲ್ ಕಾಣಿಸಿಕೊಂಡಿದ್ದಾರೆ. ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here