ಖ್ಯಾತ ಸಂಗೀತ ಸಂಯೋಜಕ ಎ ಆರ್‌ ರೆಹಮಾನ್‌ ‘ಕಾಂತಾರ’ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರವೀಕ್ಷಣೆಯ ಬಳಿಕ ಅವರು ನಟ, ನಿರ್ದೇಶಕ ರಿಷಭ್‌ ಶೆಟ್ಟಿ, ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಮತ್ತು ಗಾಯಕ ವಿಜಯಪ್ರಕಾಶ್‌ ಅವರೊಂದಿಗೆ ವೀಡಿಯೋ ಕಾಲ್‌ನಲ್ಲಿ ಚಿಟ್‌ಚಾಟ್‌ ನಡೆಸಿ ಅಭಿನಂದಿಸಿದ್ದಾರೆ. ಅಜನೀಶ್‌, ತಮ್ಮ ನೆಚ್ಚಿನ ಸಂಗೀತ ಸಂಯೋಜಕನೊಂದಿಗೆ ಮಾತನಾಡಿದ ಸಂದರ್ಭವನ್ನು ಟ್ವೀಟ್‌ ಮಾಡಿದ್ದಾರೆ.

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಜನಮನ್ನಣೆ ಗಳಿಸಿದ ಸಿನಿಮಾ. ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳ ಸಿನಿಪ್ರಿಯರೂ ಚಿತ್ರವನ್ನು ಮೆಚ್ಚಿ ತಲೆದೂಗಿದ್ದರು. ಭಾರತೀಯ ಸಿನಿಮಾ ಕಂಡ ಶ್ರೇಷ್ಠ ಸಂಗೀತ ಸಂಯೋಜಕ ಎ ಆರ್‌ ರೆಹಮಾನ್‌ ‘ಕಾಂತಾರ’ ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರವೀಕ್ಷಿಸಿದ ನಂತರ ಅವರು ನಟ – ನಿರ್ದೇಶಕ ರಿಷಭ್‌ ಶೆಟ್ಟಿ, ಸಂಗೀತ ಸಂಯೋಜಕ ಅಜನೀಶ್‌ ಲೋಕನಾಥ್‌ ಮತ್ತು ಗಾಯಕ ವಿಜಯ ಪ್ರಕಾಶ್‌ ಅವರೊಂದಿಗೆ ವೀಡಿಯೋ ಕಾಲ್‌ನಲ್ಲಿ ಚಿಟ್‌ಚಾಟ್‌ ನಡೆಸಿ ಅಭಿನಂದಿಸಿದ್ದಾರೆ. ವಿಶೇಷವಾಗಿ ಚಿತ್ರದ ಉತ್ತಮ ಸಂಗೀತ ನಿರ್ದೇಶನಕ್ಕೆ ಅಜನೀಶ್‌ ಅವರಿಗೆ ರೆಹಮಾನ್‌ ಅವರಿಂದ ಮೆಚ್ಚುಗೆ ಸಿಕ್ಕಿದೆ. ವೀಡಿಯೋ ಕಾಲ್‌ ಸಂವಾದದ ಸ್ಕ್ರೀನ್‌ ಶಾಟ್‌ ಅನ್ನು ಅಜನೀಶ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ಸಂಗೀತ ಸಂಯೋಜಕನಾಗಿ ನನಗೆ ರೆಹಮಾನ್‌ ಎಂದಿಗೂ ಸ್ಪೂರ್ತಿ. ಕಾಂತಾರ ಸಿನಿಮಾದಲ್ಲಿನ ನನ್ನ ಸಂಗೀತ ಮೆಚ್ಚಿ ಅವರು ಮಾತನಾಡಿದ್ದು ಹೆಮ್ಮೆ ತಂದಿದೆ. ಇದು ಸದಾ ನೆನಪಿನಲ್ಲುಳಿಯುವ ದೀಪಾವಳಿ! ಈ ಸಂದರ್ಭಕ್ಕೆ ಸಾಕ್ಷಿಯಾದ ವಿಜಯಪ್ರಕಾಶ್‌ ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ. ಜೊತೆಗೆ ಕಾಂತಾರ ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕ ರಿಷಭ್‌ ಶೆಟ್ಟಿ, ನಿರ್ಮಾಪಕರಾದ ಹೊಂಬಾಳೆ ಫಿಲಂಸ್‌ನವರಿಗೂ ಅವರು ಧನ್ಯವಾದ ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here