ಇಬ್ಬರು ನಾಯಕರು, ಇಬ್ಬರು ನಿರ್ದೇಶಕರು ಮತ್ತು ಇಬ್ಬರು ನಿರ್ಮಾಪಕರ ‘ರಮೇಶ ಸುರೇಶ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದೊಂದು ಸಂದೇಶಭರಿತ ಕಾಮಿಡಿ ಜಾನರ್‌ ಸಿನಿಮಾ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ನಾಗರಾಜ್‌ ಮಲ್ಲಿಗೇನಹಳ್ಳಿ ಮತ್ತು ರಘುರಾಜ್‌ ಗೌಡ.

‘ನಮ್ಮ ಚಿತ್ರದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆಯಾಗಲಿ, ಅನವಶ್ಯಕ ಸನ್ನಿವೇಶಗಳಾಗಲಿ ಯಾವುದೂ ಇಲ್ಲ. ಜನರಿಗೆ ಬೇಸರವಾಗದಂತೆ ಉತ್ತಮ ಮನೋರಂಜನೆಯ ನೀಡುವ ಚಿತ್ರವಿದು’ ಎನ್ನುತ್ತಾರೆ ಚಿತ್ರದ ನಾಯಕರಾದ ಬೆನಕ ಮತ್ತು ಯಶು ರಾಜ್. ರಂಗಭೂಮಿ ಮತ್ತು ಸಿನಿಮಾರಂಗದ ದಿಗ್ಗಜ ಗುಬ್ಬಿ ವೀರಣ್ಣ ಅವರ ಮರಿಮೊಮ್ಮಗ ಬೆನಕ ಈ ಚಿತ್ರದ ಹೀರೋಗಳೊಲ್ಲಬ್ಬರಾಗಿ ನಟಿಸಿದ್ದಾರೆ. ಆರ್ ಕೆ ಟಾಕೀಸ್ ಲಾಂಛನದಲ್ಲಿ ಪಿ ಕೃಷ್ಣ ಮತ್ತು ಬಿ ಶಂಕರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು ಜೂನ್‌ 21ರಂದು ಸಿನಿಮಾ ತೆರೆಕಾಣಲಿದೆ. ಬಹುಭಾಷಾ ನಟ ಸತ್ಯಪ್ರಕಾಶ್‌ ಮತ್ತು ಸಾಧುಕೋಕಿಲ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ ಆರ್ ಕೆ ಟಾಕೀಸ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದೇವೆ. ಮೊದಲ ಹೆಜ್ಜೆಯಾಗಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕರಾದ ಕೃಷ್ಣ ಹಾಗೂ ಶಂಕರ್. ನೀನಾಸಂ ರಂಗನಾಥ್, ಉಮಾ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಂದನ ಸೇಗು ಚಿತ್ರದ ನಾಯಕಿ. ಸಾಧುಕೋಕಿಲ ಅವರು “ರಮೇಶ್ ಸುರೇಶ್” ಚಿತ್ರದ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟರಾದ ಸಂತೋಷ್ ಆರ್ಯನ್, ನಾಗೇಂದ್ರ ಅರಸ್, ವಿಜಯ್ ಚೆಂಡೂರ್ ಟ್ರೇಲರ್‌ ಲಾಂಚ್‌ ಇವೆಂಟ್‌ನಲ್ಲಿ ಪ್ರಮುಖ ಅತಿಥಿಗಳಾಗಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

LEAVE A REPLY

Connect with

Please enter your comment!
Please enter your name here