ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಭಾರತದ ವಿವಿಧ ಭಾಷೆಗಳಲ್ಲಿನ ಪ್ರಮುಖ ಸಿನಿಮಾ ತಾರೆಯರಿಗೆ ಆಹ್ವಾನ ನೀಡಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಯಶ್‌ ಮತ್ತು ರಿಷಭ್‌ ಶೆಟ್ಟಿ ಅವರಿಗೆ ಆಹ್ವಾನವಿದೆ. ರಜನೀಕಾಂತ್‌, ಅಮಿತಾಭ್‌ ಬಚ್ಚನ್‌ ಸೇರಿದಂತೆ ಹಲವರು ಈ ಪಟ್ಟಿಯಲ್ಲಿದ್ದಾರೆ.

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ಭಾರತದ ಪ್ರಮುಖ ಸಿನಿಮಾ ನಟ – ನಟಿಯರಿಗೆ ಆಹ್ವಾನ ನೀಡಲಾಗಿದೆ. ಭಾರತೀಯ ಜನತಾ ಪಕ್ಷದ ಮುಖಂಡ ರಾ ಅರ್ಜುನಮೂರ್ತಿ ಅವರು ನಟ ರಜನೀಕಾಂತ್‌ ಅವರಿಗೆ ಆಹ್ವಾನ ನೀಡುತ್ತಿರುವ ಫೋಟೊವನ್ನು ತಮ್ಮ X ನಲ್ಲಿ ಹಂಚಿಕೊಂಡಿದ್ದಾರೆ. ‘ಇಂದಿನ ಕ್ಷಣ ನನ್ನ ಜೀವನದ ಅತ್ಯುತ್ತಮ ಅನುಭವವಾಗಿದೆ! ಆತ್ಮೀಯರಾದ ರಜನೀಕಾಂತ್ ಅವರ ನಿವಾಸಕ್ಕೆ ಭೇಟಿ ನೀಡಿ ರಾಮ ಜನ್ಮಭೂಮಿ ತೀರ್ಥರ ಪರವಾಗಿ ಅವರನ್ನು ಮತ್ತು ಅವರ ಕುಟುಂಬವನ್ನು ಆಹ್ವಾನಿಸಲು ನನಗೆ ತುಂಬಾ ಸಂತೋಷವಾಗಿದೆ’ ಎಂದು ಬರೆದುಕೊಂಡಿದ್ದಾರೆ. ರಾಮಮಂದಿರ ಉದ್ಘಾಟನೆಗೆ ಅನೇಕ ತಾರೆಯರನ್ನು ಆಹ್ವಾನಿಸಲಾಗಿದ್ದು, ಈ ಪಟ್ಟಿಯಲ್ಲಿ ಕನ್ನಡದ ನಟರಾದ ಯಶ್‌, ರಿಷಭ್‌ ಶೆಟ್ಟಿ ಕೂಡ ಇದ್ದಾರೆ.

ರಾಮಮಂದಿರ ಉದ್ಘಾಟನೆಗೆ ಆಹ್ವಾನಿಸಿರುವ ತಾರೆಯರ ಪಟ್ಟಿಯಲ್ಲಿ ಅಮಿತಾಭ್ ಬಚ್ಚನ್, ಅಕ್ಷಯ್ ಕುಮಾರ್, ಅನುಪಮ್ ಖೇರ್, ಮಾಧುರಿ ದೀಕ್ಷಿತ್, ಸಂಜಯ್ ಲೀಲಾ ಬನ್ಸಾಲಿ, ಧನುಷ್, ರಾಜ್‌ಕುಮಾರ್ ಹಿರಾನಿ, ಚಿರಂಜೀವಿ, ರೋಹಿತ್ ಸೇಥಿ, ರಿಷಭ್‌ ಶೆಟ್ಟಿ, ಮಧುರ್ ಭಾನ್‌ಪೋರ್ಕರ್, ಮಧುರ್ ಭನ್‌ದಾರ್ಕರ್, ಅಲಿಯಾ ಭಟ್, ಅಜಯ್ ದೇವಗನ್, ಸನ್ನಿ ಡಿಯೋಲ್, ಪ್ರಭಾಸ್, ಯಶ್, ಟೈಗರ್ ಶ್ರಾಫ್, ಆಯುಷ್ಮಾನ್ ಖುರಾನಾ, ಅರುಣ್ ಗೋವಿಲ್ ಮತ್ತು ದೀಪಿಕಾ ಚಿಖಾಲಿಯಾ ಟೋಪಿವಾಲಾ ಸೇರಿದಂತೆ ಅನೇಕರು ಪಟ್ಟಿಯಲ್ಲಿದ್ದಾರೆ. ಜನವರಿ 22ರಂದು ರಾಮಮಂದಿರದ ಪ್ರಾಣ ಪ್ರತಿಷ್ಠಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

LEAVE A REPLY

Connect with

Please enter your comment!
Please enter your name here