ಚಂದೂ ಮೊಂಡೇಟಿ ನಿರ್ದೇಶನದ ‘ತಾಂಡೇಲ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ನೈಜ ಘಟನೆಯೊಂದನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರದ ಮುಖ್ಯಭೂಮಿಕೆಯಲ್ಲಿ ನಾಗಚೈತನ್ಯ ಮತ್ತು ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ದೇವಿಶ್ರೀ ಪ್ರಸಾದ್‌ ಸಂಗೀತ ಚಿತ್ರಕ್ಕಿದೆ.

ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ತಾಂಡೇಲ್’ ತೆಲುಗು ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. ‘ಪ್ರೇಮಂ’, ‘ಕಾರ್ತಿಕೇಯ’ ಚಿತ್ರಗಳ ಖ್ಯಾತಿಯ ಚಂದೂ ಮೊಂಡೇಟಿ ಅವರು ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ನಾಗ ಚೈತನ್ಯ ಸಾಗರದ ಮಧ್ಯೆ ಹಡಗೊಂದರಲ್ಲಿ ಮೀನಿನ ಭೇಟೆಗಾಗಿ ಬಲೆ ಹಾಕುವುದರ ಮೂಲಕ ಟೀಸರ್‌ ಆರಂಭವಾಗುತ್ತದೆ. ನಂತರ ಪಾಕಿಸ್ತಾನದ ಕರಾಚಿಯ ಸೆಂಟ್ರಲ್‌ ಜೈಲಿನಲ್ಲಿ 21 ಜನರೊಂದಿಗೆ ನಾಗ ಚೈತನ್ಯ ಬಂಧಿಯಾಗಿರುವುದನ್ನು ಕಾಣಬಹುದು. ಆ ಸಂದರ್ಭದಲ್ಲಿ ದೇಶಭಕ್ತಿಯ ಕೆಲವು ಸಂಭಾಷಣೆಗಳು ಮೂಡಿಬಂದಿವೆ. ಕೊನೆಯಲ್ಲಿ ಸಾಯಿ ಪಲ್ಲವಿ ಸಮದ್ರದ ಬಳಿ ಬಂದು ಕಾಯುತ್ತಾ ಎದುರು ನೋಡುತ್ತಿರುವಾಗ ‘ಪ್ರಿಯೆ ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ. ದಯವಿಟ್ಟು ನನಗಾಗಿ ನಿನ್ನ ಮುಗುಳ್ನಗೆ ಹಾಗೇ ಇರಲಿ’ ಎನ್ನುವ ಹಿನ್ನೆಲೆ ಧ್ವನಿ ಕೇಳಿಸುತ್ತದೆ.

ಮೀನುಗಾರನ ಕುರಿತಾದ ಈ ಚಲನಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ. ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ಮತ್ತು ಹಿನ್ನೆಲೆ ಸಂಗೀತ ರಚಿಸುತ್ತಿದ್ದಾರೆ. ಸಿನಿಮಾವನ್ನು ಬನ್ನಿ ವಾಸ್ ಅವರು Geetha Arts ಬ್ಯಾನರ್‌ ಅಡಿಯಲ್ಲಿ ನಿರ್ಮಿಸುತ್ತಿದ್ದು, ಅಲ್ಲು ಅರವಿಂದ್ ಅವರು ಪ್ರಸ್ತುತಪಡಿಸಿದ್ದಾರೆ. ಶಾಮ್ದತ್ ಛಾಯಾಗ್ರಹಣ, ನವೀನ್ ನೂಲಿ ಸಂಕಲನ ನಿರ್ವಹಿಸಿದ್ದಾರೆ.

LEAVE A REPLY

Connect with

Please enter your comment!
Please enter your name here