ಹ್ಯಾಟ್ರಿಕ್‌ ಗೆಲುವು ಸಾಧಿಸಿದ ನಟ ಅಲ್ಲು ಅರ್ಜುನ್‌ ಮತ್ತು ನಿರ್ದೇಶಕ ತ್ರಿವಿಕ್ರಮ್‌ ನಾಲ್ಕನೇ ಬಾರಿ ಜೊತೆಯಾಗುತ್ತಿದ್ದಾರೆ. ಗುರುಪೂರ್ಣಿಮೆಯ ದಿನವಾದ ಇಂದು ಇವರಿಬ್ಬರ ಕಾಂಬಿನೇಷನ್‌ ಸಿನಿಮಾ ಘೋಷಣೆಯಾಗಿದೆ. ಟೀಸರ್‌ ಹೊರಬಂದಿದ್ದು ಇತರೆ ಮಾಹಿತಿ ಮುಂದಿನ ದಿನಗಳಲ್ಲಿ ತಿಳಿಯಲಿದೆ.

‘ಜುಲಾಯಿ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲ ವೈಕುಂಠಪುರಮುಲೋ’ ಯಶಸ್ವೀ ತೆಲುಗು ಸಿನಿಮಾಗಳ ನಂತರ ಮತ್ತೆ ನಾಲ್ಕನೇ ಬಾರಿ ನಟ ಅಲ್ಲು ಅರ್ಜುನ್‌ ಮತ್ತು ನಿರ್ದೇಶಕ ತ್ರಿವಿಕ್ರಮ್‌ ಜೊತೆಯಾಗುತ್ತಿದ್ದಾರೆ. ಇವರಿಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಸುದ್ದಿಯೀಗ ಅಧಿಕತೃವಾಗಿದೆ. ನಟ ಅಲ್ಲು ಅರ್ಜುನ್‌ ‘ಪುಷ್ಪ’ ಸಿನಿಮಾ ನಂತರ PAN ಇಂಡಿಯಾ ಹೀರೋ ಆಗಿದ್ದಾರೆ. ಹೀಗಾಗಿ ತ್ರಿವಿಕ್ರಮ್‌ ಸಿನಿಮಾ ಕ್ಯಾನ್ವಾಸ್‌ ಕೂಡ ಈ ಬಾರಿ ದೊಡ್ಡದಾಗಿರಲಿದೆ. ಗುರುಪೂರ್ಣಿಮೆಯ ದಿನವಾದ ಇಂದು ಟೀಸರ್‌ ಮೂಲಕ ಈ ಘೋಷಣೆಯಾಗಿದ್ದು, ಅಲ್ಲು ಅರ್ಜುನ್‌ ಅಭಿಮಾನಿಗಳು ಖುಷಿಯಾಗಿದ್ದಾರೆ. ಸದ್ಯ ‘ಪುಷ್ಪ 2’ ಚಿತ್ರೀಕರಣದಲ್ಲಿರುವ ಅಲ್ಲು ಅರ್ಜುನ್‌ ಇದಾದ ನಂತರ ಸಂದೀಪ್‌ ರೆಡ್ಡಿ ವಂಗ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ. ಟೀ – ಸೀರೀಸ್‌ ನಿರ್ಮಾಣದ ದೊಡ್ಡ ಚಿತ್ರವಿದು. ಇದಾದ ನಂತರ ತ್ರಿವಿಕ್ರಮ್‌ ಸಿನಿಮಾ ಸೆಟ್ಟೇರಲಿದೆ. ‘ಅಲ ವೈಕುಂಠಪುರಮುಲೂ’ ನಿರ್ಮಿಸಿದ್ದ ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಹಾಗೂ ಗೀತಾ ಆರ್ಟ್ಸ್ ಬ್ಯಾನರ್ ನಡಿ ಅಲ್ಲು ಅರ್ಜುನ್‌ – ತ್ರಿವಿಕ್ರಮ್‌ ನಾಲ್ಕನೇ ಸಿನಿಮಾ ತಯಾರಾಗಲಿದೆ. ಚಿತ್ರದ ಕಲಾವಿದರು ಹಾಗೂ ತಂತ್ರಜ್ಞರ ಕುರಿತ ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಕೊಡುವುದಾಗಿ ನಿರ್ದೇಶಕ ತ್ರಿವಿಕ್ರಮ್‌ ತಿಳಿಸಿದ್ದಾರೆ.

LEAVE A REPLY

Connect with

Please enter your comment!
Please enter your name here