ಖ್ಯಾತ ಚಿತ್ರಸಾಹಿತಿ ವಿಜಯೇಂದ್ರ ಪ್ರಸಾದ್‌ ರಚನೆಯ ಕತೆಯಲ್ಲಿ ನಟ ಸುದೀಪ್‌ ಅಭಿನಯಿಸಲಿದ್ದಾರೆ. ಆರ್‌ ಚಂದ್ರು ಈ ಚಿತ್ರವನ್ನು ನಿರ್ದೇಶಿಸಲಿದ್ದು, ಸುದೀಪ್‌ ಬರ್ತ್‌ಡೇ ಅಂಗವಾಗಿ ಸುದ್ದಿ ಹೊರಬಿದ್ದಿದೆ. R C Studios ಬ್ಯಾನರ್‌ ಚಿತ್ರವನ್ನು ನಿರ್ಮಿಸಲಿದೆ.

ಸುದೀಪ್‌ ಬರ್ತ್‌ಡೇಗೆ ಮತ್ತೊಂದು ನೂತನ ಸಿನಿಮಾ ಘೋಷಣೆಯಾಗಿದೆ. ಆರ್‌ ಚಂದ್ರು ನಿರ್ದೇಶನದಲ್ಲಿ ತಯಾರಾಗಲಿರುವ ಈ ಸಿನಿಮಾಗೆ ವಿಜಯೇಂದ್ರ ಪ್ರಸಾದ್‌ ಕತೆ ರಚಿಸಲಿದ್ದಾರೆ ಎನ್ನುವುದು ವಿಶೇಷ. R C Studios ಈ ಚಿತ್ರವನ್ನು ನಿರ್ಮಿಸಲಿದೆ. ವಿಜಯೇಂದ್ರ ಪ್ರಸಾದ್‌ ಅವರು ‘ಮಗಧೀರ’, ‘ಬಾಹುಬಲಿ’, ‘RRR’ನಂತಹ ಹಿಟ್ ಚಿತ್ರಗಳ ನಿರ್ದೇಶಕ, ಪ್ಯಾನ್ ಇಂಡಿಯಾ ಪರಿಕಲ್ಪನೆ ಹುಟ್ಟುಹಾಕಿದ ಎಸ್ ಎಸ್ ರಾಜಮೌಳಿಯ ಎಲ್ಲಾ ಚಿತ್ರಗಳಿಗೆ ಕಥೆಗಳನ್ನು ರಚಿಸಿದ್ದಾರೆ. R C ಸ್ಟುಡಿಯೋಸ್ ಬ್ಯಾನರ್‌ನಡಿ ಈ ವರ್ಷ 5 ದೊಡ್ಡ ಚಿತ್ರಗಳಿಗೆ ಚಾಲನೆ ದೊರೆಯಲಿದೆ. ನಾಳೆ ಸುದೀಪ್‌ ಅವರ ಜನ್ಮದಿನದಂದು ಚಿತ್ರದ ಶೀರ್ಷಿಕೆ ಬಿಡುಗಡೆಯಾಗಲಿದೆ. ವಿಜಯೇಂದ್ರ ಪ್ರಸಾದ್ ಅವರು 25ಕ್ಕೂ ಹೆಚ್ಚು ಚಿತ್ರಗಳಿಗೆ ಕಥೆ ಬರೆದಿದ್ದು, ಎಲ್ಲಾ ಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ
ಯಶಸ್ಸು ಕಂಡಿವೆ.

ನಿರ್ದೇಶನಕ್ಕೆ ಮರಳಿದ ಸುದೀಪ್‌ | ನಟ ಸುದೀಪ್‌ ‘KK’ ಸಿನಿಮಾ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದಾರೆ. KRG ಸ್ಟುಡಿಯೋಸ್‌ನ ಚಿತ್ರದಲ್ಲಿ ಅವರು ನಟಿಸುತ್ತಿರುವುದಲ್ಲದೆ ನಿರ್ದೇಶನದಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ‘ಮೈ ಆಟೋಗ್ರಾಫ್‌’ ಚಿತ್ರದೊಂದಿಗೆ ನಿರ್ದೇಶಕರಾದ ಸುದೀಪ್‌ ಮುಂದೆ ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’ ಚಿತ್ರಗಳನ್ನು ನಿರ್ದೇಶಿಸಿದರು. ‘ಮಾಣಿಕ್ಯ’ ತೆರೆಕಂಡ ಒಂಬತ್ತು ವರ್ಷಗಳ ನಂತರ ಈಗ ‘KK’ ಮೂಲಕ ಮತ್ತೆ ಅವರು ಡೈರೆಕ್ಟರ್ಟ್ಸ್‌ ಹ್ಯಾಟ್‌ ತೊಡುತ್ತಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರಲಿದೆ.

LEAVE A REPLY

Connect with

Please enter your comment!
Please enter your name here