ಪ್ರಥಮ್‌ ನಟಿಸಿ, ನಿರ್ದೇಶಿಸಿರುವ ‘ಕರ್ನಾಟಕದ ಅಳಿಯ’ ಸಿನಿಮಾದ ‘ಮನಸಿಗೆ ಹಿಡಿಸಿದನು ಇವನು’ ಸಾಂಗ್‌ ಬಿಡುಗಡೆಯಾಗಿದೆ. ಕೆ ರಾಮನಾರಾಯಣ್‌ ರಚಿಸಿರುವ ಹಾಡಿಗೆ ಪ್ರದ್ಯೋತನ್‌ ಸಂಗೀತ ಸಂಯೋಜಿಸಿದ್ದು, ಅದಿತಿ ಸಾಗರ್‌ ಹಾಡಿದ್ದಾರೆ.

‘ಇದು ವಾಮಾಚಾರದ ಕುರಿತಾದ ಸಿನಿಮಾ. ಮೂವತ್ತು ವರ್ಷಗಳ ಹಿಂದೆ ತುಳಸಿದಳ ಸಿನಿಮಾ ಬಂದಿತ್ತು. ಆನಂತರ ಪೂರ್ಣಪ್ರಮಾಣದಲ್ಲಿ ವಾಮಾಚಾರ ಕುರಿತ ಸಿನಿಮಾ ಬಂದಿಲ್ಲ. ನಾವು ಈ ವಿಷಯವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ಪ್ರಥಮ್‌. ಅವರು ನಿರ್ದೇಶಿಸಿ, ನಟಿಸಿರುವ ‘ಕರ್ನಾಕಟದ ಅಳಿಯ’ ಸಿನಿಮಾದ ಮೊದಲ ವೀಡಿಯೋ ಸಾಂಗ್‌ ‘ಮನಸಿಗೆ ಹಿಡಿಸಿದನು ಇವನು’ ಬಿಡುಗಡೆಯಾಗಿದೆ. ಕೆ ರಾಮನಾರಾಯಣ್‌ ರಚಿಸಿರುವ ಹಾಡಿಗೆ ಪ್ರದ್ಯೋತನ್‌ ಸಂಗೀತ ಸಂಯೋಜಿಸಿದ್ದು, ಅದಿತಿ ಸಾಗರ್‌ ಹಾಡಿದ್ದಾರೆ. ನಟ ಶಶಿಕುಮಾರ್‌ ಹಾಡು ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ನಟ ಶಶಿಕುಮಾರ್‌ ಮಾತನಾಡಿ, ”ನಮ್ಮಲ್ಲಿ ‘ಮುದ್ದಿನ ಅಳಿಯ’, ‘ಗಡಿಬಿಡಿ ಅಳಿಯ’ ಹೀಗೆ ಸಾಕಷ್ಟು ಜನ ಅಳಿಯಂದಿರಿದ್ದೇವೆ. ಈಗ ಪ್ರಥಮ್ ‘ಕರ್ನಾಟಕದ ಅಳಿಯ’ ಆಗಿದ್ದಾರೆ. ಈ ಹಾಡು ಬಹಳ ಇಂಪಾಗಿದೆ. ಚಿತ್ರ ಕೂಡ ಎಲ್ಲರ ಮನಸ್ಸು ಗೆಲ್ಲಲಿ’ ಎಂದು ಹಾರೈಸಿದ್ದಾರೆ. ಈ ಹಾಡು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್ ಚಿತ್ರದಲ್ಲಿ ಪ್ರಥಮ್‌ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಿತ ಬೋಪಯ್ಯ, ಜ್ಯೋತಿ, ಸ್ಪರ್ಶ ರೇಖಾ, ಓಂಪ್ರಕಾಶ್ ರಾವ್, ರಾಮಕೃಷ್ಣ, ಕೋಟೆ ಪ್ರಭಾಕರ್, ಶ್ರೀಧರ್, ವಿ.ಮನೋಹರ್, ರಮೇಶ್ ಭಟ್ ಚಿತ್ರದ ಪ್ರಮುಖ ಕಲಾವಿದರು. ಅಣಜಿ ನಾಗರಾಜ್‌ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here