‘ರಾಮನ ಅವತಾರ’ ಸಿನಿಮಾದ ‘ಮನಸು ಬೇರೆಯ ದಿಕ್ಕಲಿ ಸಾಗಲು’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಈ ಹಾಡು ರಿಷಿ ಮತ್ತು ಪ್ರಣೀತಾ ಮೇಲೆ ಚಿತ್ರಣಗೊಂಡಿದೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆಯ ಹಾಡಿಗೆ ಸಂಚಿತ್‌ ಹೆಗ್ಡೆ ದನಿಯಾಗಿದ್ದಾರೆ.

ರಿಷಿ, ಪ್ರಣೀತಾ ಮತ್ತು ಶುಭ್ರ ಅಯ್ಯಪ್ಪ ನಟನೆಯ ‘ರಾಮನ ಅವತಾರ’ ಸಿನಿಮಾ ಮೆಲೋಡಿ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ನಿರ್ದೇಶಕ ಸಿಂಪಲ್‌ ಸುನಿ ಅವರು ರಚಿಸಿರುವ ‘ಮನಸು ಬೇರೆಯ ದಿಕ್ಕಲಿ ಸಾಗಲು’ ಸಾಲುಗಳಿಗೆ ಜ್ಯೂಡಾ ಸ್ಯಾಂಡಿ ಟ್ಯೂನ್‌ ಹಾಕಿದ್ದು, ಸಂಚಿತ್‌ ಹೆಗ್ಡೆ ಹಾಡಿದ್ದಾರೆ. ರಿಷಿ ಮತ್ತು ಪ್ರಣೀತಾ ಅವರ ಮೇಲೆ ಚಿತ್ರಣಗೊಂಡಿರುವ ಈ ಹಾಡನ್ನು ಉಡುಪಿ ಬೀಚ್‌ನಲ್ಲಿ ಚಿತ್ರಿಸಲಾಗಿದೆ. ನಾಟಿ ಫ್ಯಾಕ್ಟರಿ ಯೂಟ್ಯೂಬ್‌ ಚಾನೆಲ್‌ ಖ್ಯಾತಿಯ ವಿಕಾಸ್‌ ಪಂಪಾಪತಿ ನಿರ್ದೇಶನದ ಚಿತ್ರವಿದು. ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ನಡಿ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಶ್‌ ಸೂರ್ಯವಂಶಿ ಚಿತ್ರದ ನಿರ್ಮಾಪಕರು.

ಈ ರೋಮ್ಯಾಂಟಿಕ್ ಕಾಮಿಡಿ ಜಾನರ್ ಸಿನಿಮಾಗೆ ವಿಷ್ಣುಪ್ರಸಾದ್ ಮತ್ತು ಸಮೀರ್ ದೇಶಪಾಂಡೆ ಛಾಯಾಗ್ರಹಣ, ಅಮರನಾಥ್ ಸಂಲಕನವಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದ್ದು, ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ನಟ ರಿಷಿ ಸದ್ಯ ಸಿನಿಮಾಗಳಲ್ಲದೆ ವೆಬ್‌ ಸರಣಿ ಮೂಲಕವೂ ಹೆಸರು ಮಾಡುತ್ತಿದ್ದಾರೆ. ತೆಲುಗಿನ ಜನಪ್ರಿಯ ನಿರ್ದೇಶಕ ಮಹಿ ರಾಘವ್ ನಿರ್ದೇಶನದ ಕ್ರೈಮ್ – ಡ್ರಾಮಾ ‘ಶೈತಾನ್’ ಮುಖ್ಯಭೂಮಿಕೆಯಲ್ಲಿ ಅವರು ನಟಿಸಿದ್ದರು. ಈಗ ರಾಮನ ಅವತಾರ ಸಿನಿಮಾ ಮೂಲಕ ಲವರ್ ಬಾಯ್ ಆಗಿ ತೆರೆಗೆ ಮರಳುತ್ತಿದ್ದಾರೆ.

LEAVE A REPLY

Connect with

Please enter your comment!
Please enter your name here