ನಿನ್ನೆ (ಮಾರ್ಚ್‌ 13) ರಾತ್ರಿ ನಟ ತುಕಾಲಿ ಸಂತೋಷ್‌ ಕಾರಿಗೆ ಆಟೋವೊಂದು ಢಿಕ್ಕಿಯಾಗಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜಗದೀಶ್‌ (44 ವರ್ಷ) ಇಂದು (ಮಾರ್ಚ್‌ 14) ಕೊನೆಯುಸಿರೆಳೆದಿದ್ದಾರೆ.

ಬಿಗ್‌ಬಾಸ್‌ ಖ್ಯಾತಿಯ ನಟ ತುಕಾಲಿ ಸಂತೋಷ್‌ ಮತ್ತು ಅವರ ಪತ್ನಿ ಮಾನಸ ನಿನ್ನೆ ರಾತ್ರಿ ಕಾರಿನಲ್ಲಿ ತಮ್ಮ ಊರು ಹೊಳೆನರಸೀಪುರಕ್ಕೆ ತೆರಳುತ್ತಿದ್ದರು. ಕುಣಿಗಲ್‌ ತಾಲೂಕಿನ ಹೊನ್ನೇನಹಳ್ಳಿ ಬಳಿ ಆಟೋವೊಂದು ಅವರ ಕಾರಿಗೆ ಢಿಕ್ಕಿಯಾಗಿತ್ತು. ತೀವ್ರವಾಗ ಗಾಯಗೊಂಡಿದ್ದ ಆಟೋ ಚಾಲಕ ಜಗದೀಶ್‌ ಅವರನ್ನು ಕುಣಿಗಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜಗದೀಶ್‌ (44 ವರ್ಷ) ಇಂದು (ಮಾರ್ಚ್‌ 14) ಅಸುನೀಗಿದ್ದಾರೆ. ಜಗದೀಶ್‌ ಕೋಡಿಹಳ್ಳಿ ಪಾಳ್ಯದ ನಿವಾಸಿ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕುಣಿಗಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ತುಕಾಲಿ ಸಂತೋಷ್‌ ಇತ್ತೀಚೆಗಷ್ಟೇ ಹೊಸ ಕಿಯಾ ಸೆಲ್ಟೋಸ್‌ ಕಾರು ಖರೀದಿಸಿದ್ದರು. ಕಾರಿನೊಂದಿಗಿನ ಅವರ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದವು. ಹೊಸ ಕಾರು ಖರೀದಿಸಿದ ಎರಡು ವಾರಗಳಲ್ಲೇ ಅಪಘಾತ ಸಂಭವಿಸಿದೆ.

LEAVE A REPLY

Connect with

Please enter your comment!
Please enter your name here