ಅಕಾಲಿಕವಾಗಿ ಅಗಲಿದ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ‘ರಾಜಾ ಮಾರ್ತಾಂಡ’ ಅಕ್ಟೋಬರ್‌ 6ರಂದು ತೆರೆಕಾಣಲಿದೆ. ಅಂದು ಧ್ರುವ ಸರ್ಜಾ ಬರ್ತ್‌ಡೇ. ತಮ್ಮ ಜನ್ಮದಿನದಂದು ಅಣ್ಣನ ಸಿನಿಮಾ ಸೆಲೆಬ್ರೇಟ್‌ ಮಾಡಲು ಸಜ್ಜಾಗಿದ್ದಾರೆ ಧ್ರುವ ಸರ್ಜಾ.

ನಟ ಚಿರಂಜೀವಿ ಸರ್ಜಾ ಅಕಾಲಿಕವಾಗಿ ನಮ್ಮನ್ನು ಅಗಲಿದರು. ಇಹಲೋಕ ತ್ಯಜಿಸಿದಾಗ ಅವರ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಡಬ್ಬಿಂಗ್‌ ಬಾಕಿ ಇತ್ತು. ಸಿನಿಮಾದಲ್ಲಿನ ಚಿರು ಪಾತ್ರಕ್ಕೆ ಅವರ ಸಹೋದರ, ನಟ ಧ್ರುವ ಸರ್ಜಾ ಅವರು ಧ್ವನಿ ನೀಡಿದ್ದಾರೆ. ಈ ಸಿನಿಮಾದ ಬಿಡುಗಡೆಯ ದಿನಾಂಕ ಕಾರಣಾಂತರಗಳಿಂದ ಮುಂದಕ್ಕೆ ಹೋಗುತ್ತಲೇ ಇತ್ತು. ಈಗ ಸಿನಿಮಾಗೆ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಧ್ರುವ ಸರ್ಜಾ ಅವರ ಜನ್ಮದಿನದಂದು ‘ರಾಜಮಾರ್ತಾಂಡ’ ಬಿಡುಗಡೆಯಾಗಲಿದೆ. ಅಕ್ಟೋಬರ್ 6 ಧ್ರುವ ಸರ್ಜಾ ಅವರ ಜನ್ಮದಿನ. ಅಂದು ಶುಕ್ರವಾರ ಕೂಡ ಹೌದು. ಅಣ್ಣ ಚಿರು ಮೇಲೆ ಧ್ರುವ ಅವರಿಗೆ ಅಪಾರ ಪ್ರೀತಿ ಇತ್ತು. ಈಗ ಜನ್ಮದಿನದಂದೇ ಅಣ್ಣನ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಧ್ರುವ ಸರ್ಜಾ ಖುಷಿಯಾಗಿದ್ದಾರೆ. ಚಿತ್ರತಂಡದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ‘ರಾಜಮಾರ್ತಾಂಡ’ ಚಿತ್ರವನ್ನು ರಾಮನಾರಾಯಣ್ ನಿರ್ದೇಶಿಸಿದ್ದು, ಶಿವಕುಮಾರ್ ನಿರ್ಮಿಸಿದ್ದಾರೆ.  ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ಧರ್ಮಾವೀಶ್ ಹಿನ್ನೆಲೆ ಸಂಗೀತ ನೀಡಿದ್ದಾರೆ.  ವೆಂಕಟೇಶ್ ಯು ಡಿ ವಿ ಸಂಕಲನ, ಕೆ ಗಣೇಶ್ ಛಾಯಾಗ್ರಹಣ, ವಿನೋದ್ ಮತ್ತು ಪಳನೀರಾಜ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಭೂಷಣ್ ಮತ್ತು ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.

LEAVE A REPLY

Connect with

Please enter your comment!
Please enter your name here