ಬಾಲಚಂದ್ರ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ ‘ಕಣಂಜಾರು’ ಸಿನಿಮಾ ಸದ್ದಿಲ್ಲದೆ ಪೂರ್ಣಗೊಂಡಿದೆ. ಇದೊಂದು ಥ್ರಿಲ್ಲರ್‌ ಕಥಾವಸ್ತು. ಅಪೂರ್ವ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.

‘ಕಣಂಜಾರು’ ಎನ್ನುವ ವಿಶಿಷ್ಟ ಶೀರ್ಷಿಕೆಯ ಸಿನಿಮಾ ಸೆಟ್ಟೇರಿದೆ. ಕಾರ್ಕಳ ಬಳಿಯ ಊರಿನ ಹೆಸರು ಕಣಂಜಾರು. ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಆ ಹೆಸರು ಇಡಲಾಗಿದ್ದು, ಅದು ಯಾಕೆ ಎನ್ನುವುದನ್ನು ಚಿತ್ರದಲ್ಲಿ ನೋಡಬೇಕು ಎನ್ನುತ್ತಾರೆ ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ನಾಯಕನಟ ಆರ್ ಬಾಲಚಂದ್ರ. ಈ ಹಿಂದೆ ಅವರು ‘ಮಹಾನುಭಾವರು’ ಸಿನಿಮಾ ನಿರ್ದೇಶಿಸಿ, ಹೀರೋ ಆಗಿ ನಟಿಸಿದ್ದರು. ಈಗ ‘ಕಣಂಜಾರು’ ಕೈಗೆತ್ತಿಕೊಂಡಿದ್ದಾರೆ. ‘ಇದೊಂದು ಆಸಕ್ತಿ ಮತ್ತು ಕುತೂಹಲಕಾರಿ ಸಂಗತಿಯ ಕತೆಯಾದ್ದರಿಂದ ನಾನೇ ನಿರ್ದೇಶನ ಮಾಡಲು ಮುಂದಾದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಅಂತಿಮ ಹಂತದಲ್ಲಿದೆ. ಸಿನಿಮಾ ಕುರಿತಂತೆ ಇತರೆ ಮಾಹಿತಿಯನ್ನು ಹಂತಹಂತವಾಗಿ ಹೇಳುತ್ತೇವೆ’ ಎನ್ನುತ್ತಾರೆ ಬಾಲಚಂದ್ರ. ಆರ್ ಪಿ ಫಿಲ್ಮ್ಸ್ ಬ್ಯಾನರ್ ಅಡಿ ತಯರಾಗುತ್ತಿರುವ ಚಿತ್ರದ ನಾಯಕಿಯಾಗಿ ಅಪೂರ್ವ ಗೌಡ ನಟಿಸುತ್ತಿದ್ದಾರೆ. ಕಾರ್ಕಳ, ಉಡುಪಿ, ಹೊನ್ನಾವರ ಸೇರಿದಂತೆ ಮತ್ತಿತರೆಡೆ 60 ದಿನಗಳ ಕಾಲ ಚಿತ್ರೀಕಣ ಮಾಡಲಾಗಿದೆ. ಶರ್ಮಿತಾ ಗೌಡ, ರಾಮಕೃಷ್ಣ, ಪಿ ಎಸ್ ಶ್ರೀಧರ್, ಮೇಘ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ, ಶಶಾಂಕ್ ಶೇಷಗಿರಿ ಹಿನ್ನೆಲೆ ಸಂಗೀತ, ವೆಂಕಿ ಯುಡಿವಿ ಸಂಕಲನ, ಮಂಜುನಾಥ್ ಹೆಗ್ಡೆ ಛಾಯಾಗ್ರಹಣ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here