ವಿಜಯ್‌ ದೇವರಕೊಂಡ ಮತ್ತು ಸಮಂತಾ ಜೋಡಿಯ ‘ಖುಷಿ’ ಸಿನಿಮಾದ ‘ಆರಾಧ್ಯ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಹಾಡಿನ ಕನ್ನಡ ಅವತರಣಿಕೆಗೆ ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯ ರಚಿಸಿದ್ದು, ಹರಿಚರಣ್‌ ಮತ್ತು ಚಿನ್ಮಯಿ ಶ್ರೀಪಾದ್‌ ಹಾಡಿದ್ದಾರೆ.

ಶಿವ ನರ್ವಣ ನಿರ್ದೇಶನದಲ್ಲಿ ತಯಾರಾಗಿರುವ ‘ಖುಷಿ’ ತೆಲುಗು ಸಿನಿಮಾ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ವಿಜಯ್‌ ದೇವರಕೊಂಡ ಮತ್ತು ಸಮಂತಾ ಚಿತ್ರದ ಮುಖ್ಯಭೂಮಿಕೆಯ ಸಿನಿಮಾ ಎನ್ನುವುದು ಈ ನಿರೀಕ್ಷೆಗೆ ಕಾರಣ. ಚಿತ್ರದ ‘ನನ್ನ ರೋಜಾ ನೀನೇ’ ಹಾಡಿನ ನಂತರ ಈಗ ‘ಆರಾಧ್ಯ’ ಲಿರಿಕಲ್‌ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಗಂಡ – ಹೆಂಡತಿ ನಡುವಿನ ಪ್ರೇಮಗೀತೆ ಇದಾಗಿದ್ದು, ದೇವರಕೊಂಡ ಮತ್ತು ಸಮಂತಾ ಜೋಡಿಯ ಕೆಮಿಸ್ಟ್ರಿ ಚೆನ್ನಾಗಿ ವರ್ಕ್‌ ಆಗಿರುವಂತಿದೆ. ಹಾಡಿನ ಕನ್ನಡ ಅವತರಣಿಕೆಯೂ ಇದ್ದು, ವಿ ನಾಗೇಂದ್ರ ಪ್ರಸಾದ್‌ ರಚನೆಯಲ್ಲಿ ಹಾಡು ಸಿದ್ಧವಾಗಿದೆ. ಹೇಷಂ ವಹಾಬ್‌ ಸಂಗೀತ ಸಂಯೋಜನೆಯಲ್ಲಿ ಹರಿಚರಣ್‌ ಮತ್ತು ಚಿನ್ಮಯಿ ಶ್ರೀಪಾದ್‌ ಹಾಡಿದ್ದಾರೆ.

ಇದೊಂದು ರೊಮ್ಯಾಂಟಿಕ್‌ – ಲವ್‌ ಎಂಟರ್‌ಟೇನರ್‌ ಎಂದು ಚಿತ್ರತಂಡ ಹೇಳಿಕೊಂಡಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ತೆರೆಗೆ ಬರಲಿದೆ. ಮೈತ್ರಿ ಮೂವಿ ಬ್ಯಾನರ್ ಅಡಿ ತಯಾರಾಗಿರುವ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಜಯರಾಂ, ಮುರಳಿ ಶರ್ಮ, ಲಕ್ಷ್ಮಿ, ಅಲಿ, ವಿನ್ನಿಲಾ ಕಿಶೋರ್‌ ಇದ್ದಾರೆ. ಜಿ ಮುರಳಿ ಛಾಯಾಗ್ರಹಣ, ಪ್ರವೀಣ್‌ ಪುಡಿ ಸಂಕಲನ ಚಿತ್ರಕ್ಕಿದೆ. ‘ಖುಷಿ’ ಸೆಪ್ಟೆಂಬರ್‌ 1ರಂದು ತೆರೆಗೆ ಬರಲಿದೆ.

LEAVE A REPLY

Connect with

Please enter your comment!
Please enter your name here