ರಾಜಮೌಳಿ – ಮಹೇಶ್‌ ಬಾಬು ನೂತನ ತೆಲುಗು ಸಿನಿಮಾದ ಖಳಪಾತ್ರದಲ್ಲಿ ರವಿತೇಜ ನಟಿಸಲಿದ್ದಾರೆ. ಇನ್ನೂ ಶೀರ್ಷಿಕೆ ನಿಗದಿಯಾಗದ ಚಿತ್ರವನ್ನು ಸದ್ಯ ‘SSMB-29’ ಎಂದು ಕರೆಯಲಾಗಿದೆ. ನಟ ರವಿತೇಜ ಈ ಹಿಂದೆ ರಾಜಮೌಳಿ ನಿರ್ದೇಶನದ ‘ವಿಕ್ರಮಾರ್ಕುಡು’ ತೆಲುಗು ಚಿತ್ರದಲ್ಲಿ ನಟಿಸಿದ್ದರು.

ಎಸ್‌ ಎಸ್‌ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್‌ ಬಾಬು ನಟಿಸುತ್ತಿರುವ ಚಿತ್ರವನ್ನು ‘SSMB-29’ ತಾತ್ಕಾಲಿಕ ಶೀರ್ಷಿಕೆಯಿಂದ ಕರೆಯಲಾಗಿದೆ. ಇದೊಂದು PAN ಇಂಡಿಯಾ ಚಿತ್ರವಾಗಲಿದ್ದು, ಖ್ಯಾತ ತೆಲುಗು ನಟ ರವಿತೇಜ ವಿಲನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಈ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಕುರಿತು ಆಸಕ್ತಿದಾಯಕ ವಿಚಾರವೊಂದನ್ನು ಬಹಿರಂಗಪಡಿಸಿದ್ದು, ಟಾಲಿವುಡ್ ಸ್ಟಾರ್ ನಟ ರವಿತೇಜ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಲಿದ್ದಾರೆ ಎನ್ನಲಾಗಿದೆ. ಈ ವಿಷಯ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

SS ರಾಜಮೌಳಿ ಅವರ ‘RRR’ ಸಿನಿಮಾ ವಿಶ್ವದೆಲ್ಲೆಡೆ ಸದ್ದು ಮಾಡಿದೆ. ಈ ಚಿತ್ರದ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ಇವರ ಮುಂದಿನ ಸಿನಿಮಾಗಳನ್ನು ಸಿನಿರಂಗದವರಿಂದ ಹಿಡಿದು ಅಭಿಮಾನಿಗಳವರೆಗೂ ಪ್ರತಿಯೊಬ್ಬರು ನಿರೀಕ್ಷಿಸುತ್ತಿದ್ದಾರೆ. ರಾಜಮೌಳಿ ಮತ್ತು ರವಿತೇಜ ಉತ್ತಮ ಸ್ನೇಹಿತರು., ಈಗಾಗಲೇ ಇವರಿಬ್ಬರು ಜೊತೆಯಾಗಿ ಮಾಡಿರುವ ‘ವಿಕ್ರಮಾರ್ಕುಡು’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಎನಿಸಿಕೊಂಡಿತ್ತು. ಇತ್ತೀಚೆಗಷ್ಟೇ ‘ಟೈಗರ್ ನಾಗೇಶ್ವರ್‌ ರಾವ್‌’ ಚಿತ್ರದ ಪ್ರಮೋಷನ್‌ನಲ್ಲಿ ಜಕ್ಕಣ್ಣ ಜೊತೆ ಸಿನಿಮಾ ಮಾಡಲು ಆಸಕ್ತಿ ಇದೆ ಎಂದು ರವಿತೇಜ ಹೇಳಿಕೊಂಡಿದ್ದರು.

LEAVE A REPLY

Connect with

Please enter your comment!
Please enter your name here