ಕಿರುತೆರೆ ಕಾಮಿಡಿ ರಿಯಾಲಿಟಿ ಶೋಗಳ ಜನಪ್ರಿಯ ಕಲಾವಿದರಾದ ಜಗ್ಗಪ್ಪ ಮತ್ತು ಸುಷ್ಮಿತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ಅವರ ವಿವಾಹ ಮಹೋತ್ಸವ ನೆರವೇರಿದೆ. ಸಮಾರಂಭದಲ್ಲಿ ಸಿನಿಮಾ ಮತ್ತು ಕಿರುತೆರೆಯ ಹಲವು ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡು ಶುಭ ಹಾರೈಸಿದ್ದಾರೆ.

‘ಮಜಾಭಾರತ’ ಖ್ಯಾತಿಯ ಕಿರುತೆರೆ ಕಲಾವಿದರಾದ ಜಗ್ಗಪ್ಪ ಮತ್ತು ಸಿಷ್ಮಿತಾ ಅವರ ವಿವಾಹ ನಿನ್ನೆ (ನವೆಂಬರ್‌ 19) ನೆರವೇರಿದೆ. ಕಿರುತೆರೆ ಕಾಮಿಡಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಇವರು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ಸಂಗತಿಯನ್ನು ZEE ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಭರ್ಜರಿ ಬ್ಯಾಚುಲರ್ಸ್‌’ ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದ್ದರು. ನಿನ್ನೆ ನಡೆದ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್‌ವುಡ್‌ ತಾರೆಯರಾದ ರವಿಚಂದ್ರನ್‌, ಪ್ರಜ್ವಲ್‌ ದೇವರಾಜ್‌, ಚಂದನ್‌, ಕವಿತಾ, ಅಂಕಿತಾ ಅಮರ್‌, ಅನನ್ಯ ಅಮರ್‌ ಸೇರಿದಂತೆ ಕಿರುತೆರೆಯ ಜನಪ್ರಿಯ ಕಾಮಿಡಿ ಶೋಗಳಾದ ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ತಂಡಗಳ ಕಲಾವಿದರು, ನಿರೂಪಕರು ಹಾಗೂ ತಂತ್ರಜ್ಞರು ಆಗಮಿಸಿ ಶುಭ ಹಾರೈಸಿದ್ದಾರೆ.

LEAVE A REPLY

Connect with

Please enter your comment!
Please enter your name here