ನಟ, ನಿರ್ಮಾಪಕ ಮಹೇಶ್‌ ಬಾಬು ಅವರು ಅಡವಿ ಸೇಶ್‌ ಅಭಿನಯದ ‘ಮೇಜರ್‌ʼ ಸಿನಿಮಾದ ‘ಹೃದಯಮ’ ಸಾಂಗ್‌ ರಿಲೀಸ್‌ ಮಾಡಿದ್ದಾರೆ. ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಕುರಿತ ಈ ಬಯೋಪಿಕ್‌ ಸಿನಿಮಾ ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ತಯಾರಾಗಿದೆ.

“ಪ್ರೀತಿ ಮತ್ತು ಮುಗ್ಧತೆಯ ಈ ಹಾಡು ನನಗೆ ತುಂಬಾ ಇಷ್ಟವಾಯ್ತು. ನಿಮಗೂ ಇಷ್ಟವಾಗಲಿದೆ” ಎಂದು ‘ಮೇಜರ್‌’ ಸಿನಿಮಾದ ‘ಹೃದಯಮ’ ವೀಡಿಯೋ ಸಾಂಗ್‌ ಟ್ವೀಟ್‌ ಮಾಡಿದ್ದಾರೆ ತೆಲುಗು ನಟ, ನಿರ್ಮಾಪಕ ಮಹೇಶ್‌ ಬಾಬು. ಕೃಷ್ಣಕಾಂತ್‌ ಮತ್ತು ವಿ.ಎನ್‌.ವಿ.ರಮೇಶ್‌ ಕುಮಾರ್‌ ರಚಿಸಿರುವ ಹಾಡಿಗೆ ಶ್ರೀಚರಣ್‌ ಪಕಲ ಸಂಗೀತ ಸಂಯೋಜಿಸಿದ್ದು, ಸಿದ್‌ ಶ್ರೀರಾಮ್‌ ಹಾಡಿದ್ದಾರೆ. ಈ ಸಿನಿಮಾ ಮಲಯಾಳಂಗೆ ಡಬ್‌ ಆಗುತ್ತಿದ್ದು, ‘ಹೃದಯಮ’ ಮಲಯಾಳಂ ಅವತರಣಿಕೆ ‘ಪೊನ್‌ ಮಲಾರೆ’ ಹಾಡನ್ನು ಮಾಲಿವುಡ್‌ ಹೀರೋ ದುಲ್ಕರ್‌ ಸಲ್ಮಾನ್‌ ಬಿಡುಗಡೆಗೊಳಿಸಿದ್ದಾರೆ. ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಬಯೋಪಿಕ್‌ ಸಿನಿಮಾ ‘ಮೇಜರ್‌’ ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಶಶಿಕಿರಣ್‌ ಟಿಕ್ಕಾ ಚಿತ್ರದ ನಿರ್ದೇಶಕ.

2008ರ ಮುಂಬಯಿ 26/11 ತಾಜ್ ಹೋಟೆಲ್‌ ಉಗ್ರರ ಸಂಘರ್ಷದಲ್ಲಿ ಜನರನ್ನು ರಕ್ಷಿಸದವರು NSG ಕಮ್ಯಾಂಡೋ ಮೇಜರ್ ಉನ್ನಿಕೃಷ್ಣನ್‌. ಚಿತ್ರದಲ್ಲಿ ಸಂದೀಪ್ ಉನ್ನಿಕೃಷ್ಣನ್‌ ಅವರು ಭಾರತೀಯ ಸೈನ್ಯಕ್ಕೆ ಸಲ್ಲಿಸಿದ ಸೇವೆ ಮತ್ತು ಅವರ ವೈಯಕ್ತಿಕ ಬದುಕಿನ ವಿವರಗಳೂ ಇರಲಿವೆ. “ಸಂದೀಪ್ ಎಂತಹ ಯೋಧ ಎನ್ನುವುದು ಜನರಿಗೆ ಗೊತ್ತಿದೆ. ಅವರ ಶೈರ್ಯಕ್ಕೆ 26/11 ಘಟನೆಯೊಂದೇ ಪ್ರಮುಖ ಉದಾಹರಣೆಯಲ್ಲ. ಕಾರ್ಗಿಲ್‌ ಯುದ್ಧದಲ್ಲಿ ಕ್ಯಾಪ್ಟನ್ ಆಗಿ ಅವರು ಹೋರಾಡಿದ್ದರು. ಹೈದರಾಬಾದ್‌ನಲ್ಲಿ ಕಾರ್ಯ ನಿರ್ವಿಹಿಸಿದ್ದ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿಗೆ ತೆರಳಿದರು. ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್‌ನಲ್ಲಿ ಅವರು ತರಬೇತಿ ಅಧಿಕಾರಿಯಾಗಿದ್ದರು. ಅವರ ಬದುಕು ಕೂಡ ಆದರ್ಶಪ್ರಾಯವಾಗಿದೆ” ಎಂದು ನಟ ಅಡಿವಿ ಸೇಶ್ ಹೇಳುತ್ತಾರೆ. ಸಾಯಿ ಮಂಜ್ರೇಕರ್‌, ಶೋಭಿತಾ ಧುಲಿಪಾಲಾ, ಪ್ರಕಾಶ್ ರೈ, ರೇವತಿ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂದಿನ ತಿಂಗಳು ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆಯಾಗಬೇಕಿತ್ತು. ಕೋವಿಡ್‌ನಿಂದಾಗಿ ಸಿನಿಮಾದ ಬಿಡುಗಡೆ ಮುಂದಕ್ಕೆ ಹೋಗಬಹುದು.

LEAVE A REPLY

Connect with

Please enter your comment!
Please enter your name here