ಚಂದೂ ಮೊಂಡೇಟಿ ನಿರ್ದೇಶನದಲ್ಲಿ ನಾಗ ಚೈತನ್ಯ ನಟಿಸುತ್ತಿರುವ ನೂತನ ತೆಲುಗು ಚಿತ್ರಕ್ಕೆ ‘ತಾಂಡೇಲ್‌’ ಎನ್ನುವ ಶೀರ್ಷಿಕೆ ನಿಗಧಿಯಾಗಿದೆ. ಚಿತ್ರದಲ್ಲಿ ನಾಗ ಚೈತನ್ಯ ಮೀನುಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿಪಲ್ಲವಿ ಈ ಸಿನಿಮಾದ ನಾಯಕಿ.

ನಾಗ ಚೈತನ್ಯ ನಟಿಸಲಿರುವ ನೂತನ ತೆಲುಗು ಚಿತ್ರದ ಶೀರ್ಷಿಕೆ ಮತ್ತು ಫಸ್ಟ್‌ ಲುಕ್‌ ಫೊಸ್ಟರ್‌ ಬಿಡುಗಡೆಯಾಗಿದೆ. ಚಿತ್ರಕ್ಕೆ ‘ತಾಂಡೇಲ್’ ಎನ್ನುವ ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಫೊಸ್ಟರ್‌ನಲ್ಲಿ ನಾಗ ಚೈತನ್ಯ ಮೀನುಗಾರನಾಗಿ ಕಾಣಿಸಿಕೊಂಡಿದ್ದಾರೆ. ಸಾಯಿ ಪಲ್ಲವಿ ಚಿತ್ರದ ನಾಯಕಿ. ಈ ಕುರಿತು ನಾಗ ಚೈತನ್ಯ ಅವರು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಫೋಸ್ಟರ್‌ ಹಂಚಿಕೊಂಡು, ”NC23′ ಅಥವಾ ‘ತಾಂಡೇಲ್’ ಚಿತ್ರದಲ್ಲಿ ನಟಿಸಲು ನಾನು ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುತ್ತದೆ’ ಎಂದಿದ್ದಾರೆ. ಚಿತ್ರತಂಡವು ಈ ವರ್ಷದ ಆರಂಭದಲ್ಲಿ ಕೆ ಮಚ್ಚಿಲೇಸಂ ಎಂಬ ಮೀನುಗಾರಿಕಾ ಗ್ರಾಮಕ್ಕೆ ಭೇಟಿ ನೀಡಿತ್ತು. ಶ್ರೀಕಾಕುಲಂ ಸಮೀಪದಲ್ಲಿರುವ ಈ ಗ್ರಾಮವು ಮೀನುಗಾರ ಸಮುದಾಯದವರ ನೆಲೆಯಾಗಿದೆ.

ನಿರ್ದೇಶಕ ಚಂದೂ ಮೊಂಡೇಟಿ ಮತ್ತು ನಾಗಚೈತನ್ಯ ಇಬ್ಬರೂ ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಹಳ್ಳಿಯಲ್ಲಿ ನಡೆದ ಸತ್ಯ ಘಟನೆಯನ್ನು ಆಧರಿಸಿ ತಯಾರಾಗುತ್ತಿರುವ ಚಿತ್ರವಿದು’ ಎಂದು ಹೇಳಿದ್ದರು. ಅವರು ಚಲನಚಿತ್ರಕ್ಕಾಗಿ ತಯಾರಿ ನಡೆಸುವ ಮುನ್ನಾ ಮೀನುಗಾರರೊಂದಿಗೆ ಈ ಕುರಿತು ಸಂವಾದ ನಡೆಸಿರುವುದಾಗಿ ಹೇಳಿಕೊಂಡಿದ್ದರು. ನಾಗ ಚೈತನ್ಯ, ವಿಕ್ರಮ್ ಕೆ ಕುಮಾರ್ ನಿರ್ದೇಶನದ ‘ಧೂತ’ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ‘ಥ್ಯಾಂಕ್ಯೂ’ ಮತ್ತು ‘ಮನಂ’ ಚಿತ್ರಗಳಲ್ಲಿ ಇವರಿಬ್ಬರು ಒಟ್ಟಿಗೆ ಕೆಲಸ ಮಾಡಿದ್ದರು.

LEAVE A REPLY

Connect with

Please enter your comment!
Please enter your name here